ಬೆಂಗಳೂರು ಮೂಲದ ಯುವಕನಿಗೆ ಗಾಯ
ಭಟ್ಕಳ ತಾಲೂಕಿನ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಸಂಬವಿಸಿ ಬೆಂಗಳೂರು ಮೂಲದ ಯುವಕನಿಗೆ ಚಿಕ್ಕಪುಟ್ಟ ಗಾಯಗಳಾಗಿ ಯುವಕ ಅದ್ರಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ
ಬೆಂಗಳೂರು ಮೂಲದ ಯುವಕ ಹೊನ್ನಾವರದ ಕಡೆಯಿಂದ ಶಿರೂರು ಕಡೆ ತನ್ನ ದ್ವಿಚಕ್ರವಾಹನದಲ್ಲಿ ತೆರಳುತ್ತಿರುವ ಸಂದರ್ಬದಲ್ಲಿ ಭಟ್ಕಳ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕಾ ಎಕಿ ಯುವಕನೊರ್ವ ತನ್ನ ದ್ವಿಚಕ್ರ ವಾಹನದೊಂದಿಗೆ ಅಡ್ಡ ಬಂದ ಪರಿಣಾಮವಾಗಿ ಎರಡು ದ್ವಿಚಕ್ರ ವಾಹನದ ಮದ್ಯ ಡಿಕ್ಕಿ ಸಂಬವಿಸಿ ಯುವಕರಿಗೆ ಗಾಯಗಳಾಗಿದ್ದು ಬೆಂಗಳೂರು ಮೂಲದ ಯುವಕನಿಗೆ ತಲೆಗೆ ಸ್ವಲ್ಪ ಪ್ರಮಾಣದ ಗಂಬಿರ ಗಾಯಗಳಾಗಿದ್ದು ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ
ಅಪಘಾತದ ಸಂದರ್ಬದಲ್ಲಿ ಸಮಾಜ ಸೇವಕರಾದ ತೆಂಗಿನ ಗುಂಡಿ ವಿಶ್ವ ಮಾದೇವ ನಾಯ್ಕ ಎನ್ನುವವರು ಗಾಯಾಳು ಯುವಕನ ನೆರವಿಗೆ ಬಂದು ಯುವಕನನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಿ ನಂತರ ಯುವಕನನ್ನು ಆತನ ಉರಾದ ಬೆಂಗಳೂರಿಗೆ ಕಳುಕಿಸಿಕೊಟ್ಟು ಮಾನವಿಯತೆಯನ್ನು ಮೆರೆದಿದ್ದಾರೆ.