ಭಟ್ಕಳ ತಾಲೂಕಾಢಳಿತದ ವತಿಯಿಂದ ಹಿರಿಯ ನಾಗರಿಕರಿಗೆ ಸನ್ಮಾನ

ತಪ್ಪದೆ ಮತದಾನವನ್ನು ಮಾಡಿ ಹಿರಿಯ ನಾಗರಿಕರಲ್ಲಿ ಸಹಾಯಕ ಆಯುಕ್ತೆ ಮಮತಾ ದೇವಿ ಮನವಿ

ಭಟ್ಕಳ: ತಾಲೂಕ ಆಡಳಿತದ ವತಿಯಿಂದ ತಾಲೂಕಿನಲ್ಲಿ ನೂರು ವರ್ಷ ತುಂಬಿರುವ ಕೆಲವು ಹಿರಿಯ ನಾಗರಿಕರ ಮನೆಗಳಿಗೆ ಬೇಟಿ ನೀಡಿ ಮತದಾನದ ಬಗ್ಗೆ ಜಾಗ್ರತಿ ಮುಡಿಸಲಾಯುತು.

ಭಟ್ಕಳ ತಾಲೂಕಿನ ಶಿರಾಲಿ ಮುರ್ಡೆಶ್ವರ ಬೆಂಗ್ರೆ ಬೈಲೂರಿನಲ್ಲಿ ನೂರು ವರ್ಷ ತುಂಬಿರುವ ಹಿರಿಯ ನಾಗರಿಕರ ಮನೆ ಮನೆಗಳಿಗೆ ಬೇಟಿ ನೀಡಿ ಮತದಾನದ ಬಗ್ಗೆ ಜಾಗ್ರತಿ ಮೂಡಿಸಲಾಯಿತು ನೂರು ವರ್ಷ ತುಂಬಿರುವ ಹಿರಿಯ ಜೀವಗಳಲ್ಲಿ ತಾಲೂ ಮತದಾನವನ್ನು ಮಾಡುವುದರ ಮೂಲಕ ದೇಶದ ಅಭಿವೃದ್ದಿಗೆ ಕೈಜೋಡಿಸಿ ಎಂದು ತಾಲೂಕ ಸಹಾಯಕ ಆಯುಕ್ತೆ ಮಮತಾ ದೇವಿ ಮನವಿ ಮಾಡಿಕೊಂಡರು . ಈ ಸಂದರ್ಬದಲ್ಲಿ ಅವರು ಮಾತನಾಡಿ ದಾನಗಳಲ್ಲಿ ಶ್ರೇಷ್ಟದಾನ ಮತದಾನ ಎಂದರೆ ತಪ್ಪಾಗಲಿಕ್ಕಿಲ್ಲಾ ದೇಶಕಟ್ಟುವಲ್ಲಿ ಸೂಕ್ತ ನಾಯಕನನ್ನು ಆರಿಸುವಲ್ಲಿ ಈ ಮತದಾನದ ಪ್ರಕ್ರೀಯೆ ಮಹತ್ವದ ಪಾತ್ರವನ್ನೆ ವಹಿಸುತ್ತದೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಮನಗಂಡು ಚುನಾವಣೆಯ ಸಂದರ್ಬದಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ಮತದಾನ ಮಾಡುವುದರ ಮೂಲಕ ದೇಶದ ಆಡಳಿತ ನಡೆಸಲು ಸಮರ್ಥರನ್ನು ಆರಿಸಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರ್ ಸುಮಂತ್, ಚುನಾವಣಾ ವಿಭಾಗ ಸುನಿಲ್ , ಗ್ರಾಮ ಸೇವಕ ನಾಗಪ್ಪ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top