ಭಟ್ಕಳ ಸೊಡಿಗದ್ದೆ ಕ್ರಾಸ್ ಬಳಿ ಸರಕಾರಿ ಬಸ್ ಹಾಗು  ಮಿನಿನ ಲಾರಿ ಮಧ್ಯ ಅಪಘಾತ

ತಪ್ಪಿದ  ಭಾರಿ  ಅನಾಹುತ : ಪಾರಾದ ಲಾರಿ ಚಾಲಕ

ಭಟ್ಕಳ: ತಾಲೂಕಿನ ಸೊಡಿಗದ್ದೆ ಕ್ರಾಸ್ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗು  ಮೀನು ತುಂಬಿದ ಲಾರಿಯ ಮದ್ಯ ಅಪಘಾತ ಸಂಬವಿಸಿದ್ದು ಲಾರಿ ಚಾಲಕ  ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ಭಟ್ಕಳದಿಂದ ಕುಂದಾಪುರದ ಕಡೆ ಸಾಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಸೊಡಿಗದ್ದೆ ಕ್ರಾಸ್ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಏಕಾಎಕಿ ನಿಲ್ಲಿಸಿದ ಪರಿಣಾಮ‌ ಭಟ್ಕಳ ಬಂದರ್ ಇಂದ ಮಿನು ತುಂಬಿಕೊಂಡು ಕುಂದಾಪುರ ಕಡೆ ಸಾಗುತ್ತಿದ್ದ ಮೀನಿನ ಪಿಕಪ್ ಲಾರಿ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬಾಗಕ್ಕೆ ಗುದ್ದಿದೆ ಅಪಘಾತದ ರಬಸಕ್ಕೆ ಮಿನು ತುಂಬಿದ ಪಿಕಪ್ ಲಾರಿ ಸಂಪೂರ್ಣ ಜಖುಂ ಗೊಂಡಿದ್ದು ಲಾರಿ ಚಾಲಕ ಕೂದಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ

WhatsApp
Facebook
Telegram
error: Content is protected !!
Scroll to Top