ಸಿದ್ದಾಪುರ:- ಸ್ವತಂತ್ರ ಪೂರ್ವದಲ್ಲಿ ನಮ್ಮನ್ನು ಈಸ್ಟ್ ಇಂಡಿಯಾ ಕಂಪನಿ ಆಳಿತ್ತು ಈಗ ನಮ್ಮ ದೇಶವನ್ನು ಆರ್ ಎಸ್ ಎಸ್ ಮತ್ತು ಬಿಜೆಪಿ ಕಂಪನಿ ಆಳುತ್ತಿದೆ. ಇದು ಡೆಮೊಕ್ರಟಿಕ್ ಸರ್ಕಾರ ಅಲ್ಲ ಇದು ಕಂಪನಿ ಸರ್ಕಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಈಶ್ವರ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ
ಸಿದ್ದರಾಮಯ್ಯನವರ ಅಭಿಮಾನಿಗಳು ಎಲ್ಲರೂ ಸೇರಿ ಅವರ 75ನೇ ಅಮೃತ ಮಹೋತ್ಸವವನ್ನು 15 ಲಕ್ಷ ಜನ ಸೇರಿ ದಾವಣಗೆರೆಯಲ್ಲಿ ಆಚರಿಸಿದರೆ ಅದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗಲಿಲ್ಲ.
ಸಿದ್ದರಾಮಯ್ಯನವರ ಮೇಲೆ ಎಸೆದ ಮೊಟ್ಟೆ ಅದು ಕೇವಲ ಅವರ ಮೇಲೆ ಎಸೆದ ಮೊಟ್ಟೆಯಲ್ಲ ಎಲ್ಲಾ ಹಿಂದೂಗಳ ಮೇಲೆ ಎಸೆದ ಮೊಟ್ಟೆ. ಹಿಂದುಗಳಲ್ಲಿ ಹಿಂದುಳಿದವರಿಗೆ ಮಾಡಿದ ಅಪಮಾನ ಎಂದರು.
ಧರ್ಮ ಧರ್ಮಗಳ ನಡುವೆ , ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ, ವಿಷ ಬೀಜವನ್ನು ಬಿತ್ತುವ ಕೆಲಸ ಮಾಡಿ ಕೋಮು ಸೌಹಾರ್ದತೆಯನ್ನು ಹದಗೆಡಿಸಿದ್ದೀರಿ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕೇವಲ ಎಮೋಷನಲ್ ವಿಷಯಗಳನ್ನು ಮುಂದಿಟ್ಟು ರಾಜಕಾರಣ ಮಾಡಿದರೆ ಜನ ಓಟು ಕೊಡುತ್ತಾರೆ ಎಂದು ನೀವು ಭಾವಿಸಿದ್ದೀರಾ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 130 ಕ್ಕೂ ಅಧಿಕ ಸೀಟ್ ಪಡೆದು ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.