ಭಟ್ಕಳ ತಂಜಿಂ ವತಿಯಿಂದ ಸುದ್ದಿಗೋಷ್ಟಿ

75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಬ್ರಹತ್ ಬೈಕ್ ರ್ಯಾಲಿ ಇನಾಯತ್ ಉಲ್ಲಾ ಶಾಭಂದ್ರಿ

ಭಟ್ಕಳ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಗಷ್ಟ 15 ರಂದು ಧರ್ಮಾತಿತವಾಗಿ ಯಾವುದೆ ಬೇದಭಾವವಿಲ್ಲದೆ ಬ್ರಹತ್ ಪ್ರಮಾಣದಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗುವುದು ಪ್ರತಿಯೊಬ್ಬರು ರ್ಯಾಲಿಯಲ್ಲಿ ಭಾಗವಹಿಸಬೇಕು ಎಂದು ಇನಾಯತ್ ಉಲ್ಲಾ ಶಾಭಂದ್ರಿ ಹೇಳಿದರು.

ಅವರು ತಾಲೂಕಿನ ತಂಜಿಮ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ದೇಶದಾಧ್ಯಂತ 75ನೆ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ ದೇಶದಾದ್ಯಂತ ಬಾರಿ ತಯಾರಿನಡೆಯುತ್ತಿದೆ ಆದರೆ ನಮ್ಮ ತಾಲೂಕಿನಲ್ಲಿ ಆ ಪ್ರಮಾಣದ ಸಂಬ್ರಮಾಚರಣೆ ಕಂಡುಬರುತ್ತಿಲ್ಲಾ ಆದ್ದರಿಂದ ನಮ್ಮ ತಂಜಿಮ್ ಸಂಸ್ಥೆಯ ವತಿಯಿಂದ ಬ್ರಹತ್ ಪ್ರಮಾಣದಲ್ಲಿ ಹಿಂದೂ ಮುಸ್ಲೀಂ ಕ್ರೈಸ್ತ ಎಂಬ ಯಾವುದೆ ಬೇದ ಭಾವಗಳಿಲ್ಲದೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ರ್ಯಾಲಿಯು ಅಗಷ್ಟ 15 ರಂದು 4 ಘಂಟೆಗೆ ಆನಂದ ಆಶ್ರಮ ಗ್ರೌಂಡಿಂದ ಪ್ರಾರಂಬವಾಗಿ ಶಂಶುದೀನ್ ಸರ್ಕಲ್ ಮೂಲಕ ತೆರಳಿ ಹೋವಿನ ಚೌಕ ಸುಲ್ಲಾನ್ ಸ್ಟ್ರೀಟ್ ಹಾಗು ರಾಷ್ಟ್ರೀಯ ಹೆದ್ದಾರಿ ಒಂದು ತೆಂಗಿನಗುಂಡಿ ಕ್ರಾಸ್ ಮೂಲಕ ತೆರಳಿ ತಾಲೂಕ ಕ್ರಿಡಾಂಗಣದಲ್ಲಿ ಮುಕ್ತಾಯವಾಗುತ್ತದೆ ಹಾಗೆ ರಾತ್ರಿ 9 ಕ್ಕೆ ಹಳೆ ತಹಶಿಲ್ದಾರ್ ಕಛೇರಿಯ ಪಕ್ಕದಲ್ಲಿರುವ ಗ್ರೌಂಡಿನಲ್ಲಿ ಸಭಾ ಕಾರ್ಯಕ್ರಮ ನಡೆಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಹುತಾತ್ಮರಿಗೆ ಗೌರವ ಸಲ್ಲಿಸಲಾಗುವುದು ಈ ಏಲ್ಲಾ ಕಾರ್ಯಕ್ರಮಕ್ಕೆ ಯಾವುದೆ ಜಾತಿ ಧರ್ಮ ಎಂಬ ಬೇದ ಭಾವ ಇಲ್ಲದೆ ಎಲ್ಲರು ಭಾಗವಹಿಸಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ತಂಜಿಮ್ ಅಧ್ಯಕ್ಷ ಎಸ್ ಎಂ ಪರ್ವೇಜ್ ಮುಸ್ಲೀಂ ಪೆಡರಢಷನ್ ಅಜೀಜು ರೇಹಮಾನ್ ಅಬ್ದು ಸಮಿ ಕೋಲಾ , ಸಾದಿಕ್ ಮಟ್ಡಾ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top