ಭಟ್ಕಳ ತಾಲೂಕಾಡಳಿತದ ವತಿಯಿಂದ ಹರ್ ಘರ್ ತಿರಂಗಾ ಕುರಿತು ಜಾಥಾ

ಭಟ್ಕಳದಲ್ಲಿ ತಾಲೂಕ ಆಡಳಿತ ಭಟ್ಕಳ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅನುಷ್ಠಾನದ ಕುರಿತು ಅರಿವು ಮೂಡಿಸುವ ಜಾಥಾ

ಭಟ್ಕಳ- ಭಟ್ಕಳದಲ್ಲಿ ಗುರುವಾರ ತಾಲೂಕ ಆಡಳಿತ ಭಟ್ಕಳ ನೇತೃತ್ವದಲ್ಲಿ ಹರ್ ಘರ್ ತಿರಂಗಾ ಅನುಷ್ಠಾನದ ಕುರಿತು 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಭಟ್ಕಳದ
ಶಿಕ್ಷಣ ಇಲಾಖೆ ಮತ್ತು ತಾಲೂಕ ಪಂಚಾಯತ್ ಆಡಳಿತ ಸಹಕಾರದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾ ನಡೆಯಿತು . ಈ ಸಂದರ್ಭದಲ್ಲಿ ಭಟ್ಕಳ ತಹಸೀಲ್ದಾರ್ ಸುಮಂತ್ ಅವರು ಮಾತನಾಡಿ ಸರ್ಕಾರದ ಸುತ್ತೋಲೆಯಂತೆ ಕ್ರಮ ಕೈಗೊಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ವಾತಂತ್ರ‍್ಯ ದಿನದಂದು ಸರ್ಕಾರದ ಆದೇಶದ ಪ್ರಕಾರ ಪ್ರತಿಯೊಂದು ಮನೆಯಲ್ಲಿಯೂ ನಮ್ಮ ದೇಶದ ಭಾವುಟ ಹಾರಾಡಬೇಕು. ಈ ಬಗ್ಗೆ ಎಲ್ಲಾ ಗ್ರಾಮ ಪಂಚಾಯತಿಗಳಿಗೂ ಮಾಹಿತಿ ಕಳುಹಿಸಬೇಕು. ನಾವೆಲ್ಲರೂ ಅದ್ಧೂರಿಯಿಂದ ಸ್ವಾತಂತ್ರ‍್ಯ ದಿನವನ್ನು ಆಚರಿಸೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಮಾತಾದೇವಿ, ತಹಸೀಲ್ದಾರ್ ಸುಮಂತ್ ಬಿ.ಈ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ್ ಸಿ, ಕ್ಷೇತ್ರ ಶಿಕ್ಷಣ ಅಧಿಕಾರಿ ದೇವಿದಾಸ್ ಮೊಗೇರ್, ಸರ್ಕಾರಿ ಇಲಾಖಾ ಶಿಬ್ಬಂದಿಗಳು, ಶಾಲಾ , ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top