ಮೃತರ ಕುಟುಂಬಕ್ಕೆ ಧನ ಸಹಾಯ
ಶಿರೂರ್ ಟೋಲ್ ಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಹೊನ್ನಾವರ ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಹಾಡಗೇರಿ ನಿವಾಸಿಯಾದ ಮಂಜುನಾಥ ನಾಯ್ಕ ಹಾಗೂ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಳ್ಕೂರು ಮೂಲದ ಗಜಾನನ ನಾಯ್ಕ ಹಾಗೂ ಅವರ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ಹಾಡಗೇರಿಯ ದಂಪತಿಗಳಾದ ಲೋಕೇಶ ನಾಯ್ಕ ಮತ್ತು ಜ್ಯೋತಿ ನಾಯ್ಕ ಅವರ ಮನೆಗೆ ಉದ್ಯಮಿಗಳು ಬಿಜೆಪಿ ನಾಯಕರು ಆದ ಈಶ್ವರ ನಾಯ್ಕ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕವಾಗಿ ವೈಯಕ್ತಿಕ ಧನ ಸಹಾಯ ನೀಡಿದರು
ತಂದೆ ತಾಯಿಯನ್ನು ಕಳೆದುಕೊಂಡ ಆ ಎರಡೂ ಮಕ್ಕಳ ಮುಂದಿನ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ತಿಳಿಸಿ ಧೈರ್ಯ ನೀಡಿದರು.
ದೇವರು ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು