ವಿಶ್ವಕರ್ಮ ಗೆಳೆಯರ ಬಳಗ (ರಿ )ಭಟ್ಕಳ ಇವರ ಆಶ್ರಯದಲ್ಲಿ “ಮನೆಗೊಂದು ಗಿಡ “ಅಭಿಯಾನ ವಿಶ್ವಕರ್ಮ ಗೆಳೆಯರ ಬಳಗ (ರಿ )ಭಟ್ಕಳ ಇವರ ಆಶ್ರಯದಲ್ಲಿ “ಮನೆಗೊಂದು ಗಿಡ “ಅಭಿಯಾನದಲ್ಲಿ ವನಮಹೋತ್ಸವ ಕಾರ್ಯಕ್ರಮವು ಭಟ್ಕಳ ತಾಲೂಕಿನ ಶಿರಾಲಿಯ ಸಮುದಾಯ ಅರೋಗ್ಯ ಕೇಂದ್ರ (ಸರಕಾರಿ ಆಸ್ಪತ್ರೆಯ ಆವರಣ )ದಲ್ಲಿ ಗಿಡನೆಟ್ಟು ಚಾಲನೆ ನೀಡಲಾಯಿತು. ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಮೇಸ್ತ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿಶ್ವಕರ್ಮ ಗೆಳೆಯರ ಬಳಗದ ಅಧ್ಯಕ್ಷ ಗಣೇಶ s ಆಚಾರ್ಯ ರ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ forest Officer ಮಧುಕರ್ ಸರ್,ಭಾಸ್ಕರ ಬಿ ಆಚಾರ್ಯ, ಪ್ರಸನ್ನ ಪ್ರಭು, ಗಂಗಾಧರ್ ನಾಯ್ಕ್, ರಾಜಾರಾಮ್ ಪ್ರಭು, ದಾಮೋದರ್ ಶಾನಭಾಗ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಆಚಾರ್ಯ, ರವಿ ಆಚಾರ್ಯ, ಸಮಾಜದ ಮುಖoಡರಾದ ಗಜಾನನ ಆಚಾರ್ಯ, ಮಂಜುನಾಥ್ ಆಚಾರ್ಯ, ನಾಗೇಶ್ ಆಚಾರ್ಯ ಹಾಗೂ ಸಂಘದ ಎಲ್ಲ ಸದಸ್ಯರೂ ಉಪಸ್ಥಿತರಿದ್ದರು. ನಂತರ ಸದಸ್ಯರೆಲ್ಲರೂ ಸೇರಿ ಮನೆ ಮನೆಗೆ ತೆರಳಿ ಗಿಡಗಳನ್ನು ವಿತರಿಸಲಾಯಿತು.
ವಿಶ್ವಕರ್ಮ ಗೆಳೆಯರ ಬಳಗ ಇವರ ಆಶ್ರಯದಲ್ಲಿ”ಮನೆಗೊಂದು ಗಿಡ “ಅಭಿಯಾನ
WhatsApp
Facebook
Telegram