ಕರ್ನಾಟಕ ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತ್‌ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪುರಸಭಾ ಮುಖ್ಯಾಧಿಕಾರಿಗಳಿಗೆ ಮನವಿ

ಜುಲೈ ೧ ರಿಂದ ರಾಜ್ಯ ವ್ಯಾಪಿ ಮುಷ್ಕರ ಹಮ್ಮಿಕೊಂಡಿರುವ ಕುರಿತು ಮನವಿ

ಭಟ್ಕಳ: ಕರ್ನಾಟಕ ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತ್‌ ಹೊರಗುತ್ತಿಗೆ ನೌಕರರ ರಾಜ್ಯ ಸಂಘದ ಕರೆಯ ಮೇರೆಗೆ ಜುಲೈ ೧ ರಿಂದ ಕುಡಿಯುವ ನೀರು ಸ್ವಚ್ಚತೆ ಸ್ಥಗಿತಗೋಳಿಸಿ ರಾಜ್ಯ ವ್ಯಾಪಿ ಮುಷ್ಕರ ಹಮ್ಮಿಕೊಳ್ಳುವ ಕುರಿತು ಭಟ್ಕಳ ತಾಲೂಕ ಪುರಸಭಾ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತ್‌ ಹೊರಗುತ್ತಿಗೆ ನೌಕರರ ಸಂಘದ ಭಟ್ಕಳ ಘಟಕದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು .

ಮನವಿಯಲ್ಲಿ ಕರ್ನಾಟಕದ ಎಲ್ಲಾ ೧೪ ನಗರ ಸ್ಥಳಿಯ ಸಂಸ್ಥೆಗಳ ಕಸ ಸಾಗಿಸುವ ವಾಹನ ಚಾಲಕರು ವಾಟರ್‌ ಮನ್‌ , ಢಾಟ ಎಂಟರ್‌ ಆಪರೇಟರ್‌ ಯುಜಿಡಿ ಕಾರ್ಮಿಕರು ತ್ಯಾಜ್ಯ ಸಹಾಯಕರು ಪೌರಕಾರ್ಮಿಕರ ಮಾದರಿಯಲ್ಲಿ ಗುತ್ತಿಗೆ ಪದ್ದತಿ ಬದಲು ನೇರ ವೇತನಕ್ಕೆ ಒಳಪಡುವಂತೆ ಒತ್ತಾಯಿಸಿ ಹಾಗು ಪೌರಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಜುಲೈ ೧ ರಿಂದ ರಾಜ್ಯ ವ್ಯಾಪಿ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಈ ಹಿನ್ನೆಲೆಯಲ್ಲಿ ಮುಂಚಿತವಾಗಿ ಈ ವಿಷಯವನ್ನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲಾಗುತ್ತಿದ್ದು ಅಗತ್ಯ ಸಹಕಾರ ನಿಡುವಂತೆ ಕೋರಿ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಸಂಘಟನೆಯ ಶ್ರೀದರ ನಾಯ್ಕ, ರಾಜೇಶ ನಾಯ್ಕ, ವಾಸು ನಾಯ್ಕ, ರಮೇಶ ನಾಯ್ಕ, ರಾಜೇಶ ದೇವಾಡಿಗ , ಶೇಕರ್‌ ನಾಯ್ಕ ರಾಘು ನಾಯ್ಕ ಶಿವರಾಜ್‌ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top