ಭಟ್ಕಳ : ತಾಲೂಕಿನ ಶಂಶುದೀನ್ ಸರ್ಕಲ್ ಕೆಲವು ದಿನಗಳ ಹಿಂದೆ ಹಳೆಕೋಟೆ ಹನುಮಂತ ದೇವಸ್ತಾನದ ಉತ್ಸವದ ನಿಮಿತ್ತ ಸಂಪೂರ್ಣ ಕೆಸರಿಮಯವಾಗಿ ಬದಲಾಗಿದ್ದು ಇದರ ಬೆನ್ನಲ್ಲೆ ರಂಜಾನ್ ಹಬ್ಬದ ಪ್ರಯುಕ್ತ ಶಂಸುದ್ದೀನ್ ಸರ್ಕಲ್ ಇತಿಹಾಸದಲ್ಲೆ ಮೊದಲ ಬಾರಿಗೆ ಸದ್ಯ ಹಸಿರುಮಯವಾಗಿ ಮಾರ್ಪಟ್ಟಿದ್ದು ತಾಲೂಕಿನಲ್ಲಿ ರಂಜಾನ್ ಹಬ್ಬಕ್ಕೆ ಕಳೆಕಟ್ಟಿದೆ ಎಂದೆ ಹೇಳಬಹುದು
ಕೆಲ ದಿನಗಳ ಹಿಂದಷ್ಟೇ ತಾಲೂಕಿನ ಶಿರಾಲಿ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಿನ್ನೆಲೆ ಭಟ್ಕಳ ತಾಲೂಕಿನ ಗೊರಟೆ ಅಂದರೆ ಉತ್ತರ ಕನ್ನಡ ಗಡಿಬಾಗದಿಂದ ಹಿಡಿದು ಮೂಡಭಟ್ಕಳ ಬೈಪಾಸ್ ನಿಂದ ಶಂಶುದೀನ್ ಸರ್ಕಲ್ ಶಿರಾಲಿ ಹೀಗೆ ಹಲವೆಡೆ ಕೇಸರಿ ತೋರಣಗಳಿಂದ (ಬಂಟಿಂಗ್) ಕಂಗೊಳಿಸುತ್ತಿದ್ದು . ಉತ್ಹಾಸವದ ನಿಮ್ಗೆಮಿತ್ತ ಸಂಪೂರ್ಣ ಭಟ್ಕಳವೆ ಕೇಸರಿಮಯವಾಗಿ ಪರಿವರ್ತನೆಯಾಗಿದ್ದು ಭಟ್ಕಳದಾಧ್ಯಂತ ಶಿವಾಜಿ ಮಹಾರಾಜರಂತ ಸ್ವಾತಂತ್ರ್ಯ ಹೊರಾಟಗಾರರ ದ್ವಜಗಳು ರಾರಾಜಿಸುತ್ತಿತ್ತು ಈಗ ಮುಸ್ಲೀಂ ಜನಾಂಗದವರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಭಟ್ಕಳ ಸಂಶುದ್ದೀನ್ ಸರ್ಕಲ್ ಈಗ ಸಂಪೂರ್ಣ ಹಸಿರುಮಯವಾಗಿದ್ದು ತಾಲೂಕಿನಲ್ಲಿ ರಂಜಾನ್ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿಟ್ಟಿದೆ