ಅಂಬೇಡ್ಕರ್ ಒಬ್ಬರು ಅತ್ಯದ್ಬುತ ವ್ಯಕ್ತಿತ್ವವನ್ನು ಹೊಂದಿದ್ದ ಅಪರೂಪದ ಸಮಾಜ ಸುದಾರಕರು ಮಂಕಾಳ ವೈಧ್ಯ
ಭಟ್ಕಳ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾ ಹೊರಾಟ ನಡೆಸುತ್ತಿದ್ದ ಮೊಗೇರ್ ಸಮಾಜದವರು ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದು ಮಾಜಿ ಶಾಸಕ ಮಂಕಾಳ ವೈದ್ಯ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮೊಗೇರ್ ಸಮಾಜಕ್ಕೆ ದೈರ್ಯವನ್ನು ತುಂಬಿದರು
ಹಲವಾರು ದಿನಗಳಿಂದ ಜಿಲ್ಲೆಯ ಮೋಗೇರ್ ಸಮಾಜವು ತಮಗೆ ಪರಿಶಿಷ್ಟ ಜಾತ್ರಿ ಪ್ರಮಾಣ ಪತ್ರವನ್ನು ನೀಡುವಂತೆ ತಾಲೂಕಾಢಳಿತದ ಮುಂದೆ ಪ್ರತಿಭಟನೆಯನ್ನು ನಡೆಸುತ್ತಲೆ ಬಂದಿರುತ್ತದೆ ಆದರೆ ಇಲ್ಲಿಯ ವರೆಗೆ ಪ್ರಮಾಣ ಕೊಡಲ್ಪಡುತ್ತದೆಯೋ ಇಲ್ಲವೋ ಎಂಬದನ್ನು ಸರಕಾರವಾಗಲಿ ಜನ ಪ್ರತಿನಿದಿಗಳು ಸ್ಪಷ್ಟವಾಗಿ ತಿಳಿಸುತ್ತಿಲ್ಲಾ ಜನಪ್ರತಿ ನಿದಿಗಳು ಕೇವಲ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ ಇದನ್ನು ಬಿಟ್ಟರೆ ಯಾರು ಸ್ಪಷ್ಟ ನಿಲುವನ್ನು ತಾಳುತ್ತಿಲ್ಲಾ ಇದ್ರಿಂದ ಸಾರ್ವಜನಿಕರ ವಲಯದಲ್ಲಿ ಗೊಂದಲಗಳು ಉಂಟಾಗುತ್ತಿದೆ
ಅಂಬೇಡ್ಕರ್ ಜಯಂತಿಯಾದ ಇಂದು ತಾಲೂಕಿನಲ್ಲಿ ಹೋರಾಟ ನಿರತ ಮೊಗೇರ್ ಸಮಾಜ ತಾಲೂಕಿನಲ್ಲಿ ನೂರಾರು ಜನ ಸಮಾಜ ಸದಸ್ಯರೊಂದಿಗೆ ಬ್ರಹತ್ ಮೇರವಣಿಗೆಯನ್ನು ನಡೆಸಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ತಮ್ಮ ಪ್ರತಿಭಟನೆ ಪ್ರಮಾಣ ಪತ್ರ ದೊರೆಯುವವರೆಗೆ ನಿಲ್ಲದು ಎಂಬ ಸ್ಪಷ್ಟ ಸಂದೇಶವನ್ನು ತಾಲೂಕಿನಿಂದ ಸರಕಾರಕ್ಕೆ ರವಾನಿ
ಈ ಸಂದರ್ಬದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಅಂಬೇಡ್ಕರ್ ಒಬ್ಬರು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ಹೊರಾಟಗಾರರು ಸಮಾಜ ಸುದಾರಕರು ಆಗಿದ್ದಾರೆ ನಾವು ಅವರ ಸಿದ್ದಾಂತವನ್ನು ನಂಬಿ ನಡೆಯುವವರಾಗಿದ್ದವೇ ನಾವು ದುಡುಕಿ ಯಾವ ನಿರ್ಧಾರವನ್ನು ಕೈಗೊಳ್ಳುವುದು ಬೇಡ ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಆದ್ದರಿಂದ ನಮ್ಮ ಹೋರಾಟ ಶಾಂತಿಯುತವಾಗಿಯೆ ಇರಲಿ ಎಂಬುವುದು ನನ್ನ ಆಶಯ ನಾವು ಅಂಬೇಡ್ಕರ್ ಹಾಕಿಕೊಟ್ಟ ನಡೆಯಲ್ಲೆ ನಡೆಯೋಣ ಎಂಬ ಕರೆಯನ್ನು ಕೊಟ್ಟರು