ಭಾರತ್‌ ವಿಕಾಸ್‌ ಪರಿಷತ್‌ ಉಚಿತ ಮಕ್ಕಳ ಬೇಸಿಗೆ ಶಿಬಿರ ಸಂಪನ್ನ:

ಭಟ್ಕಳ: ತಾಲೂಕಿನಲ್ಲಿ ಭಾರತ್‌ ವಿಕಾಸ ಪರಿಷತ್‌, ಆರೋಗ್ಯ ಭಾರತಿ ,ಮತ್ತು ಅಮೀತಾಕ್ಷ ಯೋಗ ಕೆಂದ್ರದ ಇವರ ಸಹೋಗದಲ್ಲಿ ಮಕ್ಕಳ ಉಚಿತ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು .

ತಾಲೂಕಿನ ಕಾಶಿ ಮಠದ ಸಭಾಂಗಣದಲ್ಲಿ ಭಾರತ್‌ ವಿಕಾಸ ಪರಿಷತ್‌, ಆರೋಗ್ಯ ಭಾರತಿ ,ಮತ್ತು ಅಮೀತಾಕ್ಷ ಯೋಗ ಕೆಂದ್ರದ ಇವರ ಸಹೋಗದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಮಕ್ಕಳ ಉಚಿತ ಬೇಸಿಗೆ ಶಿಭಿರ ಯಶಸ್ವಿಯಾಗಿ ಸಂಪನ್ನಗೊಂಡಿರುತ್ತದೆ ಶಿಬಿರದಲ್ಲಿ ಪ್ರತಿದಿನ ಮಕ್ಕಳಿಗೆ ಯೋಗ ಪ್ರಾಣಯಾಮ ಧ್ಯಾನ ಕರಾಟೆ , ಚಿತ್ರಕಲೆ ಉತ್ತಮ ಜೀವನ ಶೈಲಿಗಳ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಲಾಯಿತು ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಮ್ಮ ದೇಶದದ ಪರಂಪರೆಗಳ ಬಗ್ಗೆ ದೇವೆಂದ್ರ ಅವರು ತಿಳಿಸಿಕೊಟ್ಟರೆ ಕರಾಟೆಯನ್ನು ಕಿರಣ್‌ ಶಾನಬಾಗ್‌ ಯೋಗ ಪ್ರಾಣಯಾಮಗಳನ್ನು ಅಮಿತಾಕ್ಷ ಯೋಗ ಕೆಂದ್ರದ ರಾಮಚಂದ್ರ ನಾಯ್ಕ, ಬೋದಿಸಿದರು

ಕಾರ್ಯಕ್ರಮದ ಐದನೆಯ ದಿನ ಭಟ್ಕಳ ತಾಲೂಕಿನ ಅಗ್ನಿಶಾಮಕ ದಳದವರು ಸಾರ್ವಜನಿಕರಿಗೆ ಅಗ್ನಿ ಅವಘಡಗಳನ್ನು ಯಾವ ರೀತಿಯಲ್ಲಿ ತಡೆಗಟ್ಟ ಬಹುದು ಪ್ರಾಣಹಾನಿಗಳನ್ನು ಯಾವ ರೀತಿಯಲ್ಲಿ ತಡೆಯ ಬಹುದು ಎಂಬುದರ ಬಗ್ಗೆ ಪ್ರಾತ್ಯಕ್ಷೀಕೆಯನ್ನು ಮಾಡಿಕೊಟ್ಟರು ಈ ಕಾರ್ಯಕ್ರಮ ತುಂಬ ಯಶಸ್ವಿಯಾಗಿ ಮೂಡಿ ಬಂದಿದ್ದು ಸಾರ್ವಜನಿಕರು ಇದರ ಸದುಪಯೋಗಗಳನ್ನು ಪಡೆದುಕೊಂಡರು

ಮಕ್ಕಳ ಬೇಸಿಗೆ ಶಿಭಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಕಣ್ಣಿನ ತಜ್ಞರು ನಾಯಕ್‌ ಹೆಲ್ತಕೇರ್‌ ನ ಮಾಲಕರು ಅಮೀತಾಕ್ಷ ಯೋಗ ಕೆಂದ್ರದ ಅಧ್ಯಕ್ಷರು ಆದ ವಿಶ್ವನಾಥ ನಾಯಕ ಮಾತನಾಡಿ ಇಂದು ನಾವು ನಮ್ಮ ಸಂಸ್ಕ್ರತಿಯನ್ನು ಮರೆಯುತ್ತಾ ಬಂದಿದ್ದೆವೆ ಪಾಲಕರಾದವರು ಮಕ್ಕಳಿಗೆ ನಮ್ಮ ಸಂಸ್ಕ್ರತಿಯನ್ನು ಪರಿಚಯಿಸಬೇಕಾಗಿದೆ ಆದರಿಂದ ಪ್ರತಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸ ಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಕಾರ್ಯಕ್ರದ ಮುಖ್ಯ ವಕ್ತಾರರಾದ ಜನತಾ ವಿಧ್ಯಾಲಯದ ಪ್ರಾಂಶುಪಾಲರಾದ ರಾಮ್‌ರಥ್‌ ಮಾತನಾಡಿ ಮಕ್ಕಳ ಬೆಸಿಗೆ ಶಿಭಿರ ತುಂಬ ಉತ್ತಮ ಕಾರ್ಯಕ್ರಮವಾಗಿದೆ ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕ್ರತಿ ಪರಂಪರೆಯ ಬಗ್ಗೆ ಜಾಗ್ರತಿ ಮೂಡಿಸ ಬಹುದಾಗಿದೆ ಮಕ್ಕಳು ಕೂಡ ದೇಶದ ಹಿತದೃಷ್ಟಿಯಿಂದ ನಮ್ಮ ಸಂಸ್ಕ್ರತಿ ಪರಂಪರೆಯ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ ಮಕ್ಕಳಿಗೆ ಪಾಲಕರು ನಮ್ಮ ಸಂಸ್ಕ್ರತಿ ಪರಂಪರೆ ಧರ್ಮಗಳ ಬಗ್ಗೆ ಜಾಗ್ರತಿ ಮೂಡಿಬೇಕಾದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಶಿಭಿರಾರ್ಥಿಗಳು ಹನುಮಾನ್‌ ಚಾಲಿಸಾ ಭಗವದ್ಗೀತಾ, ಯೋಗ ಪ್ರಾಣಯಾಮ , ಕರಾಟೆ ಮುಂತಾದ ಕಲೆಗಳನ್ನು ಪ್ರದರ್ಶಿಸಿದರು ಭಟ್ಕಳ ಕಾಶಿ ಮಠದ ವ್ಯವಸ್ತಾಪಕ ಸಮೀತಿಯ ಉಪಾಧ್ಯಕ್ಷರಾದ ಬಿಕೆ ಪೈ ಭಾರತ್‌ ವಿಕಾಸ ಪರೀಷತ್‌ ಅಧ್ಯಕ್ಷರಾದ ಪ್ರಕಾಶ ನಾಯ್ಕ ಮತ್ತು ದಂತ ವೈಧ್ಯರಾದ ಡಾ: ನಮೃತಾ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು

ಕಾರ್ಯಕ್ರಮವನ್ನು ಕಿರಣ್‌ ಶಾನಬಾಗ್‌ ಮತ್ತು ಶ್ರೀನಿವಾಸ ನಾಯ್ಕ ಅವರು ನಿರೂಪಿಸಿದರೆ ಅರ್ಜುನ್‌ ಮಲ್ಯ ವಂದನಾರ್ಪಣೆಯನ್ನು ಮಾಡಿದರು

ಈ ಸಂದರ್ಬದಲ್ಲಿ ಭಾರತ್‌ ವಿಕಾಸ್‌ ಪರಿಷತ್ತಿನ ಸಂದಿಪ್‌ ಶೇಟ್ ದೇವಯ್ಯ ನಾಯ್ಕ ಮಹೇಶ ನಾಯ್ಕ, ಹರ್ಷರಾಜ್‌ ಅಡಿಗ , ರಾಮನಾಥ ಬಳೆಗಾರ್‌ , ಮುಂತಾದವರು ಉಪಸ್ಥಿತರಿದ್ದು

WhatsApp
Facebook
Telegram
error: Content is protected !!
Scroll to Top