ಭಟ್ಕಳದಲ್ಲಿ ಉದಯವಾದ  ರಾಜ್ಯ ಮಾಹಿತಿ ಹಕ್ಕು ಮತ್ತು  ಸಾಮಾಜಿಕ ಕಾರ್ಯಕರ್ತರ ವೇದಿಕೆ

ಜಿಲ್ಲೇ ಹಾಗು  ತಾಲೂಕ ಘಟಕದ  ಪದಾಧಿಕಾರಿಗಳು ಹಾಗು ಸದಸ್ಯರ ಆಯ್ಕೆ

ಭಟ್ಕಳ: ರಾಜ್ಯ ಮಾಹಿತಿ ಹಕ್ಕು  ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ  ಇದರ  ಉತ್ತರ ಕನ್ನಡ  ಜಿಲ್ಲೆ ಮತ್ತು ಭಟ್ಕಳ‌ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು  

ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಹೆಚ್ ಜಿ ರಮೇಶ ಕುಣಿಗಲ್ ಅವರು ಭಟ್ಕಳ ತಾಲೂಕ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲೆ ಮತ್ತು ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ,  ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ರಾಜಾ ಹಿಂದೂಸ್ಥಾನಿ   ಹಾಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ  ಅರ್ಜುನ್ ಮಲ್ಯ ಅವರನ್ನು‌ ಆಯ್ಕೆ ಮಾಡಿದರೆ ಭಟ್ಕಳ ತಾಲೂಕ ಅಧ್ಯಕ್ಷರನ್ನಾಗಿ  ನಾಗೇಂದ್ರ ನಾಯ್ಕ  ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ ನಾಯ್ಕ ಹೆಬ್ಳೆ ಸಹ ಕಾರ್ಯದರ್ಶಿಯಾಗಿ ವಸಂತ ದೇವಾಡಿಗ ಅವರನ್ನು   ಗೌರವ ಅಧ್ಯಕ್ಷರಾಗಿ ಲಕ್ಷ್ಮಣ ಮೊಗೇರ್     ಹಾಗು ಸದಸ್ಯರನ್ನಾಗಿ ಸಿನು ನಾಯ್ಕ ಹಾಗು  ಇನ್ನಿತರರನ್ನು  ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು‌ ಭಟ್ಕಳ ತಾಲೂಕ  ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ  ಹೆಚ್ ಜಿ  ರಮೇಶ ಕುಣಿಗಲ್ ಅವರಿಗೆ ಸನ್ಮಾನ ಮಾಡಲಾಯಿತು

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷರಾದ  ಹೆಚ್ ಜಿ ಕುಣಿಗಲ್  ಮಾತನಾಡಿ ನಮ್ಮ‌ ಉದ್ದೇಶ ದೇಶದಲ್ಲಿನ   ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೆಸೆಯುವುದಾಗಿದೆ. ಕಾರಣ ಜಿಲ್ಲೆ  ತಾಲೂಕ ಘಟಕ ನಿರ್ಭಿತಿಯಿಂದ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ನಿಮ್ಮ ಜೊತೆ ರಾಜ್ಯ ಘಟಕ ಯಾವಾಗಲು ಇರುತ್ತದೆ ನಾವು ನಿರ್ಬಿತಿಯಿಂದ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಎಂದು ಹೇಳಿದರು

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾಯ೯ಕತ೯ರ ವೇದಿಕೆ(ರಿ) ಪ್ರಧಾನ ಕಾಯ೯ದಶಿ೯ಗಳಾದ ಹನುಮಂತರಾಯಪ್ಪ, ಕಾಯ೯ದಶಿ೯ಗಳಾದ ಚಂದ್ರಶೇಖರ್.ಡಿ, ರಾಜ್ಯ ಸಂಘಟನ ಕಾಯ೯ದಶಿ೯ಗಳು ಮತ್ತು ಖಜಾಂಚಿಗಳಾದ ಕುಣಿಹಳ್ಳಿ ಆರ್ ಮಂಜುನಾಥ್,‌ಮೈಸೂರು‌ ವಿಭಾಗದ ಉಪಾಧ್ಯಕ್ಷರಾದ ಅಪ್ಪಾಜಿ ಗೌಡ, ಮತ್ತು‌ ವೆಂಕಟೇಶ್,ಕುಮಾರ್ ಇನ್ನಿತರರು ‌ಉಪಸ್ತಿತರಿದ್ದರು

WhatsApp
Facebook
Telegram
error: Content is protected !!
Scroll to Top