14 ನೆ ದಿನಕ್ಕೆ ಕಾಲಿಟ್ಟ ಮೊಗೇರ್ ಸಮಾಜದ ಸತ್ಯಾಗ್ರಹ
ಭಟ್ಕಳ:ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಜಿಲ್ಲೆಯಲ್ಲಿ ಮೊಗೇರ್ ಸಮಾಜ ನಡೆಸುತ್ತಿರುವ ಹೊರಾಟ ಸ್ಥಳಕ್ಕೆ ದೇವಾಡಿಗ ಸಮಾಜದ ಅಧ್ಯಕ್ಷ ಪರಮೇಶ್ವರ ದೇವಾಡಿಗ ಅವರು ಬೇಟಿ ನೀಡಿ ತಮ್ಮ ದೇವಾಡಿಗ ಸಮಾಜದಿಂದ ಮೊಗೇರ್ ಸಮಾಜದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂಬ ಬರವಸೆಯನ್ನು ಕೊಟ್ಟರು
ಮೊಗೇರ್ ಸಮಾಜವು ಕಳೆದ 14 ದಿನಗಳಿಂದ ತಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೊರಾಟವನ್ನು ನಡೆಸುತ್ತಿದ್ದು ಮಂಗಳವಾರ ದೇವಡಿಗ ಸಮಾಜದ ಅಧ್ಯಕ್ಷ ಪರಮೇಶ್ವರ ದೇವಾಡಿಗ ಅವರು ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ನಮ್ಮ ಸಮಾಜದಿಂದ ಮೊಗೇರ್ ಸಮಾಜದ ಹೊರಾಟಕ್ಕೆ ಸಂಪೂರ್ಣ ಬೆಂಬಲವಿದ್ದು ನಾವು ಮೊಗೇರ್ ಸಮಾಜಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸುತ್ತೆವೆ ಇವರ ಈ ಹೊರಾಟ ಎಲ್ಲಿಯವರೆಗೆ ನಡೆಯುತ್ತದೆಯೋ ಅಲ್ಲಿಯವರೆಗೂ ನಾವು ಮೊಗೇರ್ ಸಮಾಜದ ಜೋತೆಯಲ್ಲಿರುತ್ತೆವೆ ಎಂದು ಹೇಳಿದರು
ಒಟ್ಟಾರೆ ಮೊಗೇರ್ ಸಮಾಜದ ಸತ್ಯಾಗ್ರಹ ನಿರಂತರವಾಗಿ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಇವರ ಈ ಹೊರಾಟ ಗಟ್ಟಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೊರಾಟದ ಸ್ವರೂಪ ಯಾವ ರೂಪವನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ