ಟಿಪ್ಪುಗೆ ‘ಮೈಸೂರು ಹುಲಿ’ ಎಂಬ ಬಿರುದು ಕೊಟ್ಟಿದ್ದು ನಾವಲ್ಲ, ಬ್ರಿಟಿಷರು: ಡಿಕೆಶಿ

ಮಾರ್ಚ್ 31 ರಂದು ಬೆಂಗಳೂರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. “ಶಿವಕುಮಾರ ಸ್ವಾಮೀಜಿಯ 115 ನೇ ಜಯಂತಿ ಕಾರ್ಯಕ್ರಮಕ್ಕೆ ಭೇಟಿ ಕೊಡ್ತಾ ಇದ್ದಾರೆ. ರಾಹುಲ್ ಗಾಂಧಿ 31 ರಂದು ಮದ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಬರುತ್ತಾರೆ.

ಬೆಂಗಳೂರು: ಟಿಪ್ಪು ಸುಲ್ತಾನ್‌ಗೆ “ಮೈಸೂರು ಹುಲಿ ” ಎಂಬ ಬಿರುದನ್ನು ಕೊಟ್ಟಿದ್ದು ನಾವಲ್ಲ, ಬದಲಾಗಿ  ಬ್ರಿಟಿಷರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

 ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ” ಟಿಪ್ಪುಗೆ ಮೈಸೂರು ಹುಲಿ ಅಂತ ನಾವು ಕೊಟ್ಟಿಲ್ಲ ಬ್ರಿಟಿಷರು ಕೊಟ್ಟಿದ್ದು.ದೇಶದ ಇತಿಹಾಸವನ್ನು ಯಾರು ಬದಲಾವಣೆ ಮಾಡೋದಕ್ಕೆ ಆಗುವುದಿಲ್ಲ. ಈ ದೇಶದ ರಾಷ್ಟ್ರಪತಿಗಳೇ ಟಿಪ್ಪು ಬಗ್ಗೆ ಕಳೆದ ಬಾರಿ ಸದನದಲ್ಲಿ ಹಾಡಿ ಹೊಗಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಇರುವರು ಪ್ರಜ್ಞೆ ಇರುವವರು.‌ ಯಾರೂ ಕೂಡ ಇತಿಹಾಸ ತಿರುಚುವುದಕ್ಕೂ ಆಗಲ್ಲ” ಎಂದರು.

31 ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ

ಮಾರ್ಚ್ 31 ರಂದು ಬೆಂಗಳೂರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಡಿಕೆ ಶಿವಕುಮಾರ್ “ಶಿವಕುಮಾರ ಸ್ವಾಮೀಜಿಯ 115 ನೇ ಜಯಂತಿ ಕಾರ್ಯಕ್ರಮಕ್ಕೆ ಭೇಟಿ ಕೊಡ್ತಾ ಇದ್ದಾರೆ. ರಾಹುಲ್ ಗಾಂಧಿ 31 ರಂದು ಮದ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಬಿಬಿಎಂಪಿಗೆ ಸಂಬಂಧಪಟ್ಟಂತ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುತ್ತಾರೆ” ಎಂದು ತಿಳಿಸಿದರು.

ಸುಮಾರು 47 ಲಕ್ಷ ಜನ‌ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರಾಗಿದ್ದಾರೆ. ಜೂಮ್ ಮುಖಾಂತರ ರಾಹುಲ್ ಗಾಂಧಿ ಸದಸ್ಯರ ಜೊತೆ ಮಾತನಾಡ್ತಾರೆ. ಬಳಿಕ ಹಿರಿಯ ನಾಯಕರ ಜೊತೆನೂ ರಾಹುಲ್ ಗಾಂಧಿ ಸಭೆ ಮಾಡ್ತಾರೆ ಎಂದು ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಮಾರ್ಚ್ 31 ರಂದು ಪ್ರತಿಭಟನೆ ನಡೆಯಲಿದೆ. ನೆ ಮುಂದೆ ಮೋಟಾರ್‌ ಬೈಕು ಹಾಗೂ ಗ್ಯಾಸ್ ಸಿಲಿಂಡರ್ ಇಟ್ಟು, ಅದಕ್ಕೆ ಹೂವಿನ ಹಾರ ಹಾಕಿ, ಜಾಗಟೆ ಬಾರಿಸಿ ಅದೊಂದು ಪೋಟೊ ತೆಗೆದು ಪ್ರಧಾನಿ ಅವರಿಗೆ ಪೋಸ್ಟ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಇನ್ನು ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪದ ಬಗ್ಗೆ ಮಾತನಾಡಿ, ಶಾಸಕಾಂಗ ಪಕ್ಷದ ನಾಯಕರು ಚರ್ಚೆ ಮಾಡಿದ್ದಾರೆ.‌ ಸಿಎಂ ಏನ್ ಉತ್ತರ ಕೊಡ್ತಾರೆ ಕಾದು ನೋಡಬೇಕಾಗಿದೆ.‌ ನನ್ನ ಮೇಲೆ ಯಾವ ಕೇಸ್ ಇತ್ತು, ಹೆಂಗೆ ನನ್ನ ಜೈಲಿಗೆ ಕಳಿಸಿದ್ರು ಎಂದು ಗೊತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು

WhatsApp
Facebook
Telegram
error: Content is protected !!
Scroll to Top