ಬೆಂಗಳೂರು: ಶೀಲ ಶಂಕಿಸಿ ಬೆಲ್ಟ್ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಹೆಚ್ಎಎಲ್ನ ಕಾಳಪ್ಪ ಲೇಔಟ್ನಲ್ಲಿ ನಡೆದಿದೆ.
ನಾಗಮ್ಮ (37) ಪತಿಯಿಂದಲೇ ಕೊಲೆಯಾದ ಮಹಿಳೆ. ನೀಲಕಂಠ (38) ಕೊಲೆ ಆರೋಪಿ. ರಾಯಚೂರು ಮೂಲದವರಾದ ದಂಪತಿ, 17 ವರ್ಷದ ಹಿಂದೆ ಮದುವೆಯಾಗಿದ್ದತು. ನೀಲಕಂಠ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ನಾಗಮ್ಮ ಮನೆಗೆಲಸ ಮಾಡಿಕೊಂಡಿದ್ದರು.
ದಂಪತಿಗೆ 8 ಮತ್ತು 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆರೋಪಿ ಪತ್ನಿಯ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದ. ಮೊನ್ನೆ ಬೆಳಗ್ಗೆ ಕೂಡ ಇಬ್ಬರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ಡಿವೋರ್ಸ್ ಕೊಟ್ಟು ಹೋಗು ಎಂದು ಪತ್ನಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ನೀಲಕಂಠ, ಬೆಲ್ಟ್ನಿಂದ ಪತ್ನಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಸದ್ಯ ಹೆಚ್ಎಎಲ್ ಪೊಲೀಸರು ಆರೋಪಿ ನೀಲಕಂಠನನ್ನು ಬಂಧಿಸಿದ್ದಾರೆ.