ಡಿಬಾರ್‌ ಮಾಡಿದ್ದಕ್ಕೆ ಮನ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ..!

ಬೆಂಗಳೂರು: ಡಿಬಾರ್‌ ಮಾಡಿದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಭವ್ಯ (21) ಎಂದು ಗುರುತಿಸಲಾಗಿದೆ ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಭವ್ಯ ಮೊದಲ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಆದರೆ ನಿನ್ನೆ ನಡೆದ ಎಕ್ಸಾಂನಲ್ಲಿ ಕಾಪಿ ಮಾಡುತ್ತಿದ್ದಾಳೆಂದು ಆರೋಪಿಸಿ ಡಿಬಾರ್‌ ಮಾಡಿದ್ದರು.ಇನ್ನೂ ಈ ವಿಚಾರವನ್ನು ಭವ್ಯ ಸೋದರಿ ದಿವ್ಯಾಗೆ ಕರೆ ಮಾಡಿ ನನ್ನನ್ನು ಡಿಬಾರ್‌ ಮಾಡಿದ್ದಾರೆ ಹಾಗಾಗಿ ನಾನು ಬದುಕುವುದಿಲ್ಲ ಎಂದು ನೋವು ಹಂಚಿಕೊಂಡಿದ್ದರು.

ಇದರಿಂದ ಗಾಬರಿಗೊಂಡ ದಿವ್ಯಾಕೂಡಲೇ ಭವ್ಯ ಅವರ ತಂದೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ . ಆದರೆ ಅಷ್ಟೋತ್ತಿಗೆ ಭವ್ಯ ಮೃತಪಟ್ಟಿದ್ದಾರೆ. ಇದೀಗಾ ಈ ಸಂಭಂದ ಜಿವನ ಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp
Facebook
Telegram
error: Content is protected !!
Scroll to Top