ಕುಡಿದ ಮತ್ತಲ್ಲಿ ಶೌಚಾಲಯದಲ್ಲೇ ಮಲಗಿದ ಭೂಪ.!

ಉತ್ತರಕನ್ನಡ(ಕಾರವಾರ) :- ಕುಡಿದ ಮತ್ತಲ್ಲಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಬಾಗಿಲು ಹಾಕಿ ಮಲಗಿ ಬಸ್ ನಿಲ್ದಾಣದ ಸಿಬ್ಬಂದಿಗಳಿಗೆ ಕುಡುಕನೊಬ್ಬ ಗಾಬರಿ ಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ. ಮಂಗಳೂರು ಮೂಲದ ಕಾಪುವಿನ ಮಂಜುನಾಥ್ ಎಂದಾಗಿದ್ದು,

ರಾತ್ರಿ ಕುಡಿದ ಅಮಲಿನಲ್ಲಿ ಶೌಚಾಲಯಕ್ಕೆ ಹೋಗಿ ಚಿಲಕ ಹಾಕಿ ಮಲಗಿದ್ದಾನೆ. ಈ ವೇಳೆ ಘಂಟೆಗಳೇ ಕಳೆದಾಗ ಶೌಚಾಲಯ ಸಿಬ್ಬಂದಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಬಾರದಿದ್ದಾಗ ಕಿಟಿಕಿಯಿಂದ ನೋಡಿದಾಗ ಶೌಚಾಲಯದಲ್ಲಿ ಶವದ ರೀತಿ ಬಿದ್ದಿರಿವುದು ಕಂಡು ಪೊಲೀಸರು ಹಾಗೂ ನಿಲ್ದಾಣದ ಸಿಬ್ಬಂದಿ ಬಾಗಿಲು ಒಡೆದು ಒಳಹೋದಾಗ ಈತ ನ ನಿಜ ಸ್ಥಿತಿ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

WhatsApp
Facebook
Telegram
error: Content is protected !!
Scroll to Top