ಬಂಟ್ವಾಳ : ಕತ್ತಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಬಂಧನ..!

ದಕ್ಷಿಣ ಕನ್ನಡ (ಬಂಟ್ವಾಳ ) : ಕತ್ತಿಯೊಂದಿಗೆ ತಾಲ್ಲೂಕಿನ ಮಿತ್ತಬೈಲ್ ಮಸೀದಿಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಸ್ಥಳದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ


ಮಂಗಳವಾರ ರಾತ್ರಿ ಸ್ಕೂಟರ್‌ನಲ್ಲಿ ಬಂದಿದ್ದ ಕಲ್ಲಡ್ಕ ನಿವಾಸಿ ಬಾಬು , ಮಸೀದಿಯ ಸಮೀಪ ಅನುಮಾನಾಸ್ಪವಾಗಿ ವರ್ತಿಸುತ್ತಿದ್ದ . ಮಸೀದಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದವರು ಆತನನ್ನು ವಿಚಾರಿಸಿದ್ದಾರೆ . ಆರಂಭದಲ್ಲಿ ‘ ನಾನು ಮಡಿಕೇರಿಯಿಂದ ಬಂದಿದ್ದು , ಪ್ರಾರ್ಥನೆ ಮಾಡಲು ಧರ್ಮ ಗುರು ಬೇಕು ‘ ಎಂದು ಹೇಳಿದ್ದಾನೆ . ನಂತರ ‘ ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು , ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾನೆ .

ಕೂಡಲೇ ಆತನನ್ನು ಹಿಡಿದ ಕೆಲಸಗಾರರು , ಸ್ಕೂಟರ್ ಪರಿಶೀಲಿಸಿದಾಗ ಅದರಲ್ಲಿ ಕತ್ತಿ ಸಿಕ್ಕಿದೆ . ನಂತರ ಮಸೀದಿ ಆಳಿತ ಕಮಿಟಿಯವರಿಗೆ ಮಾಹಿತಿ ನೀಡಿದ್ದು , ಕಮಿಟಿಯವರು ಆತನನ್ನು ವಿಚಾರಿಸಿದಾಗ ಕಲ್ಲಡ್ಕದ ನಿವಾಸಿ , ಹೆಸರು ಬಾಬು ಎಂದು ಹೇಳಿದ್ದಾನೆ . ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ . ಯಾವುದೋ ದುರುದ್ದೇಶದಿಂದ ಆಯುಧದೊಂದಿಗೆ ಮಸೀದಿಗೆ ಬಂದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ . ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ .

WhatsApp
Facebook
Telegram
error: Content is protected !!
Scroll to Top