ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ; ವರದಕ್ಷಿಣೆಗೆ ಪೀಡಿಸಿದ ಪತಿರಾಯ ಅರೆಸ್ಟ್..!

ದಕ್ಷಿಣ ಕನ್ನಡ(ಕುಂದಾಪುರ): ಸಿಗರೇಟ್​ನಿಂದ ಸುಟ್ಟು ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ ನೀಡಿದ ಪತಿರಾಯ ಅರೆಸ್ಟ್ ಆಗಿದ್ದಾನೆ. ಕುಂದಾಪುರ ‌ಪೊಲೀಸರಿಂದ ಆರೋಪಿ ಬಂಧ‌ನ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬರೆಗಟ್ಟು ನಿವಾಸಿ ಪ್ರದೀಪ್ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಸಿಗರೇಟ್​​ನಿಂದ ಚಿತ್ರಹಿಂಸೆ ನೀಡುವ ವೀಡಿಯೋ ವೈರಲ್ ಆಗಿತ್ತು. ಪತ್ನಿ ಪ್ರಿಯಾಂಕ ವರದಕ್ಷಿಣೆಗಾಗಿ ಹಿಂಸೆ ಪ್ರಕರಣ ಕೂಡ ದಾಖಲಿಸಿದ್ದರು

ಪ್ರದೀಪ್ ಹಾಗೂ ಪ್ರಿಯಾಂಕ ಪ್ರೀತಿಸಿ ಮದುವೆಯಾಗಿದ್ದರು. ಕ್ಷಮೆ ಕೇಳುವಂತೆ ಒತ್ತಾಯಿಸಿ ಸಿಗರೇಟ್​ನಿಂದ ಸುಡುವ ಯತ್ನ ಮಾಡುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪತ್ನಿ ಪ್ರಿಯಾಂಕ ವರದಕ್ಷಿಣೆಗಾಗಿ ಹಿಂಸೆ ಪ್ರಕರಣ ದಾಖಲಿಸಿದ್ದರು.

ಪ್ರತೀ ದಿನ ಚಿನ್ನ ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಪ್ರದೀಪ್, 2 ಲಕ್ಷ ಹಣ ಹಾಗೂ ನಾಲ್ಕು ಪವನ್ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿತ್ತು. ಪತ್ನಿಯ ದೂರಿನ ಮೇಲೆ ಆರೋಪಿ ಬಂಧಿಸಲಾಗಿದೆ.

WhatsApp
Facebook
Telegram
error: Content is protected !!
Scroll to Top