ಸಮಾಜ ಸೇವಕ ಹಿಂದೂ ಕಾರ್ಯಕರ್ತ ದಿವಂಗತ ದಿನು ಹಂಟರ್‌ ಅವರಿಗೆ ಚೌತನಿಯಲ್ಲಿ ಸಾರ್ವಜನಿಕರಿಂದ ಶ್ರದ್ದಾಂಜಲಿ

ಹಿಂದೂ ಸಮಾಜ ಒಬ್ಬ ನಿಷ್ಟಾವಂತ ಕಾರ್ಯಕರ್ತರನನ್ನು ಕಳೆದುಕೊಂಡಿದೆ: ಉಧ್ಯಮಿ ಈಶ್ವರ ನಾಯ್ಕ

ಭಟ್ಕಳ: ತಾಲೂಕ ಸಮಾಜ ಸೇವಕರು ಕಟ್ಟರ್‌ ಹಿಂದೂವಾದಿಯು ಆಗಿರುವ ದಿವಂಗತ ದಿನೇಶ ನಾಯ್ಕ ಯಾನೆ ದೀನು ಹಂಟರ್‌ ಅವರಿಗೆ ತಾಲೂಕಿನ ಚೌತನಿ ಕುದುರೆ ಬೀರಪ್ಪ ದೇವಸ್ಥಾನದ ಸಭಾಂಗಣದಲ್ಲಿ ಚೌತನಿ ಗೆಳೆಯರು ಹಾಗು ಸಾರ್ವಜನಿಕರ ಸಹಯೋಗದಲ್ಲಿ ಶ್ರದ್ದಾಂಜಲಿಯನ್ನು ಹಮ್ಮಿಕೊಳ್ಳಲಾಯಿತು .

ಕಾರ್ಯಕ್ರಮದಲ್ಲಿ ಉದ್ಯಮಿ ಈಶ್ವರ ನಾಯ್ಕ ಮಾತನಾಡಿ ದಿನೇಶ ನಾಯ್ಕ ಚೌತನಿ ಅವರ ಅಕಾಲಿಕ ಅಗಲಿಕೆ ನಮಗೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ ದಿನೇಶ ನಾಯ್ಕ ಹಿಂದೂ ಸಮಾಜಕ್ಕೆ ಹಾಗು ದೀನ ದಲಿತರ ನೇರವಿಗೆ ಯಾವಾಗಲು ಮುಂಚುಣಿಯಲ್ಲಿ ನಿಲ್ಲುತ್ತಿದ್ದರು ಇವರ ಸೇವೆ ಸಮಾಜದಲ್ಲಿ ಅವಿಸ್ಮರಣಿಯ ಇವರ ಜೀವಿತಾವದಿಯಲ್ಲಿ ಸಮಾಜ ಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟು ಕೊಂಡಿದ್ದರು ನಾವು ಈಗ ಇವರ ಕುಟುಂಬದ ಸಹಾಯಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಹೇಳಿದರು

ಈ ಸಂದರ್ಬದಲ್ಲಿ ಹಿಂದೂಜಾಗರಣಾ ವೇದಿಕೆಯ ತಾಲೂಕ ಅಧ್ಯಕ್ಷ ವಾಸು ನಾಯ್ಕ ಮಾತನಾಡಿ ಇಂದು ದಿನೇಶ ನಮ್ಮನ್ನು ಬಿಟ್ಟುಹೊಗಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲಾ ಚಿಕ್ಕ ವಯಸ್ಸಿನಲ್ಲೆ ಹಿಂದೂತ್ವದ ಕೆಚ್ಚುಹಚ್ಚಿಕೊಂಡಿಂದ ದಿನೇಶ ನಾಯ್ಕ ಹಿಂದೂ ಸಮಾಜಕ್ಕಾಗಿ ತುಂಬ ಕೆಲಸವನ್ನು ಮಾಡಿದ್ದಾರೆ ಜಾತಿ ಎಂಬ ಬೆದಬಾವವಿಲ್ಲದೆ ಸಮಾಜದ ಬಡ ವರ್ಗದವರ ಬೆಂಬಲಕ್ಕೆ ಯಾವಾಗಲು ದೀನೇಶ ನಾಯ್ಕ ನಿಂತಿರುತ್ತಿದ್ದರು ಇವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಸಮಸ್ಥ ಅಭಿಮಾನಿಗಳು ಗೆಳೆಯರು ಸಾರ್ವಜನಿಕರು ದೀನು ಹಂಟರ್ಪು‌ ಅವರ ಬಾವ ಚಿತ್ರಕ್ಕೆ ಪುಸ್ಪಾರ್ಚನೆ ಮಾಡಿದರು ಕಾರ್ಯಕ್ರಮದಲ್ಲಿ ಅರುಣ ನಾಯ್ಕ ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು

ಕಾರ್ಯಕ್ರಮದಲ್ಲಿ ಅಣ್ಣಪ್ಪ ನಾಯ್ಕ ಅಬ್ಬಿಹಿತ್ಲು ರಾಜು ನಾಯ್ಕ ಮುಂಡಳ್ಳಿ ವೇಂಕಟೇಶ ನಾಯ್ಕ ಪಾಂಡು ನಾಯ್ಕ ಹಿಂದೂ ಜಾಗರಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮುಟ್ಟಳ್ಳಿ ಮಂಜು ನಾಯ್ಕ ಹಾಗು ಅಭಿಮಾನಿಗಳು ಗೆಳೆಯರು ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top