ಓವರ್ ಟೇಕ್ ಮಾಡುವ ಭರದಲ್ಲಿ ಬೈಕಿಗೆ ಡಿಕ್ಕಿ;ಬೈಕ್ ಸವಾರ ಗಂಭೀರ ಗಾಯ..!

ಉತ್ತರಕನ್ನಡ(ಅಂಕೋಲಾ): ಬೈಕಿಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಕೋಲಾ ತಾಲೂಕಿನ ಹೆಗ್ಗಾರ ಪದ್ಮಾಪುರ ಬಳಿ ರಾಷ್ಟ್ರೀಯ 63 ರಲ್ಲಿ ಸಂಭವಿಸಿದೆ. ಈ ಹಿಂದೆ ಅಂಕೋಲಾದ ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದ, ಸದ್ಯ ಗೋಕರ್ಣದ ಮೇಲಿನಕೇರಿ ನಿವಾಸಿಯಾಗಿರುವ ಚಿದಾನಂದ ಶಿವಾನಂದ ಶೆಟ್ಟಿ (36) ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದು, ಈತ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಅತಿ ವೇಗವಾಗಿ ಬಂದ  ಕಾರು ಚಾಲಕ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ  ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ,ಬೈಕ್ ಸವಾರ ರಸ್ತೆಯಂಚಿಗೆ ಸಿಡಿದು ಬಿದ್ದ ಎನಲಾಗಿದೆ.

ಆತನ ಎಡ ಕೈ ಮತ್ತು ಎಡ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳದಿಂದ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳಿಯರು ಸಹಕರಿಸಿದರು.  ಮುದೋಳ ನಿವಾಸಿ ಹಸನಸಾಬ್ ಅಪ್ಪಾಸಾಬ್ ಭಗವಾನ್ ,ಅತಿವೇಗ ಮತ್ತು ನಿರ್ಲಕ್ಷದಿಂದ ತನ್ನ ಕಾರ್ ಚಲಾಯಿಸಿ  ಈ ಅಪಘಾತ ಪಡಿಸಿದ್ದ ಎನ್ನಲಾಗಿದ್ದು ಕಾರ್ ಚಾಲಕನ ಮೇಲೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

WhatsApp
Facebook
Telegram
error: Content is protected !!
Scroll to Top