ಕಾರವಾರ :- ನಮ್ಮವರನ್ನು ಕಣ್ಣೆತ್ತಿ ನೋಡಿದರೆ ಅವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ ಎಂದು ಶಿವಮೊಗ್ಗ ದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಾಸಕಿ ರೂಪಾಲಿ ನಾಯ್ಕ ವಿವಾಧಿತ ಹೇಳಿಕೆ ನೀಡಿದ್ದಾರೆ.
ಅಂಕೋಲದಲ್ಲಿ ನಡೆದ ಶಿವಾಜಿ ಜನ್ಮಶತಮಾನೋತ್ಸವ ಕಾರ್ಯಕ್ರಮದ ಕ್ರೀಡಾ ಕೂಡದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮವರನ್ನು ಕಣ್ಣೆತ್ತಿ ನೋಡಿದರೆ ಅವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ,ನಮ್ಮ ಹುಡುಗ ಧಾರಣವಾಗಿ ಸಾವನ್ನಪ್ಪಿದ್ದಾನೆ.ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ.
ಹಿಂದುಗಳು ಎಂದು ಹೇಳಿಕೊಳ್ಳುವ ಜನರು ವಿಧಾನಸಭೆಯ ಒಳಗೆ ಇದ್ದರು,ಒಳಗೆ ಇದ್ದವರು ಪ್ರತಿಭಟನೆ ಮಾಡುತಿದ್ದರು ಈಶ್ವರಪ್ಪನವರನ್ನ ಇಳಿಸಬೇಕು ಎಂದು.ಎಂತಹ ದುರ್ಬುದ್ದಿ ಇದೆ ಎನ್ನುವುದನ್ನು ಅಧಿವೇಶನದಲ್ಲಿ ಕುಳಿತು ನೋಡಿದ್ದೇವೆ.
ನಮ್ಮವರಿಗೆ ಆದ ಅನ್ಯಾಯವನ್ನು ಎತ್ತಿ ಹಿಡಿಯಬೇಕು ,ಆದ ಘಟನೆಯನ್ನ ಎತ್ತಿಹಿಡಿಯಬೇಕು ಶಿಕ್ಷೆಯಾಗಬೇಕು ಎಂದು ಹೇಳಬೇಕಾದವರು ಈಶ್ವರಪ್ಪನವರನ್ನು ವಜಾ ಮಾಡಬೇಕು ಎಂದು ಪ್ರತಿಭಟನೆ ಮಾಡಿದರು ಎಷ್ಟು ದುರ್ದೈವ.ಈ ರೀತಿ ಆಗಬಾರದು ತಪ್ಪು ಇದು ನಮ್ಮ ಹುಡುಗನಿಗೆ ನ್ಯಾಯ ಕೊಡಿಸುತ್ತೇವೆ ಎಂದರು.