ಹಿಂದೂತ್ವಕ್ಕಾಗಿ ತಮ್ಮ ಜೀವನವನ್ನೆ ದಾರೆಎರೆದ ಕಾರ್ಯಕರ್ತರಾದ ಹರ್ಷ ಹಾಗು ದಿನೇಶ ನಾಯ್ಕ ಅವರಿಗೆ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಶ್ರದ್ದಾಂಜಲಿ.

ಭಟ್ಕಳ: ಹಿಂದೂತ್ವಕ್ಕಾಗಿ ಸಮಾಜ ಘಾತುಕರಿಂದ ಹತರಾದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹಾಗು ತಮ್ಮ ಇಡಿ ಜೀವಮಾನ ಹಿಂದೂತ್ವಕ್ಕಾಗೆ ದುಡಿದ ಇನ್ನೊಬ್ಬ ಹಿಂದೂ ಕಾರ್ಯಕರ್ತ ದಿನೇಶ ನಾಯ್ಕ ಯಾನೆ ದೀನು ಹಂಟರ್‌ ಅವರಿಗೆ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಶ್ರದ್ದಾಂಜಲಿಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ದಿನೇಶ ಮೊಗೇರ್‌ ಮಾತನಾಡಿ ನಮ್ಮ ಸಂಘಟನೆಯ ಸಾಮಾಜಿಕ ಜಾಲಯಾಣದ ಪ್ರಮುಖರಲ್ಲೊಬ್ಬರಾದ ದಿನೇಶ ನಾಯ್ಕ ನಮ್ಮನ್ನು ಅಗಲಿದ್ದಾರೆ ನಾವು ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸೊಣ ಅವರ ದಿವ್ಯಾತ್ಮಕ್ಕೆ ಭಗವಂತ ಶಾಂತಿಯನ್ನು ನೀಡಲಿ ಹಾಗೆ ಈಗ ನಮ್ಮ ಹಿಂದೂ ಕಾರ್ಯಕರ್ತರ ಕೊಲೆ ಸಾಲು ಸಾಲಾಗಿ ನಡೆಯುತ್ತಿದೆ ಸದ್ಯ ಶೀವಮೊಗ್ಗದಲ್ಲಿ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯನ್ನು ಸಮಾಜ ಘಾತುಕರು ನಡೆಸಿದ್ದಾರೆ ಇದು ನಮಗೆ ತುಂಬ ನೋವನ್ನು ತಂದಿಟ್ಟಿದೆ ಇಂತ ಹಿಂದೂ ಕಾರ್ಯಕರ್ತರ ಕೊಲೆಗೆ ಕಾರಣ ನಮ್ಮಲ್ಲಿರುವ ಜಾತಿ ಎಂಬ ಪಿಡುಗು ಕಾರಣವಾಗಿದೆ ನಾವು ಇದನ್ನು ಮೊದಲು ಸರಿಪಡಿಸಿಕೊಳ್ಳಬೇಕು ಬಿಜೆಪಿ ಸರಕಾರ ನಮ್ಮ ಕಾರ್ಯಕರ್ತರಿಗೆ ರಕ್ಷಣೆಯ ಭರವಸೆಯನ್ನು ನೀಡಿ ಅಧಿಕಾರವನ್ನು ಹಿಡಿದಿದೆ ಆದರೆ ಈಗ ಅದನ್ನು ಮರೆತು ಹೋಗಿದೆ ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಕಾರ್ಯಕರ್ತರೊನ್ನೊಳ್ಳಗೊಂಡಂತೆ ಬಿಜೆಪಿ ಸರಿಯಾದ ಪಾಠವನ್ನು ಕಲಿಸುತ್ತೆವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು

ಈ ಸಂದರ್ಬದಲ್ಲಿ ಭಟ್ಕಳ ತಾಲೂಕ ಹಿಂದೂ ಜಾಗರಣಾ ವೇದಿಕೆಯ ತಾಲೂಕ ಅಧ್ಯಕ್ಷ ವಾಸು ನಾಯ್ಕ ಮಾತನಾಡಿ ನಮ್ಮ ಸಂಘಟನೆಯ ಸಾಮಾಜಿಕ ಜಾಲತಾಣದ ಪ್ರಮುಖ ದಿನೇಶ ನಾಯ್ಕ ಅವರ ಅಗಲಿಕೆ ನಮಗೆ ತುಂಬಲಾರದ ನಷ್ಷವನ್ನು ಉಂಟುಮಾಡಿದೆ ಇಂದು ನಾವು ಒಬ್ಬ ದಿಮಂತ ವ್ಯಕ್ತಿಯನ್ನು ಕಳೆದುಕೊಂಡಿದ್ದೆವೆ ಇದು ತುಂಬ ನೋವಿನ ಸಂಗತಿಯಾಗಿದೆ ಜೊತೆಗೆ ಶಿವಮೊಗ್ಗದಲ್ಲಿ ನಮ್ಮ ಕಾರ್ಯಕರ್ತ ಹರ್ಷ ಅವರನ್ನು ಮತಾಂದರು ಬರ್ಬರವಾಗಿ ಕೊಲೆಗೈದಿದ್ದಾರೆ ಹೊನ್ನಾವರದಲ್ಲಿ ಪರೇಶ ಮೆಸ್ತಾ ಕೊಲೆ ಕೊಲೆಯಾಗೆ ಉಳಿದು ಕೊಗಿದೆ ನಮ್ಮ ಕರಾವಳಿಯಲ್ಲಿ ಸಾಲು ಸಾಲು ಶಾಸಕರಿದ್ದರು ವಿಧಾನ ಸೌದದಲ್ಲಿ ಈ ಬಗ್ಗೆ ಯಾವೊಬ್ಬಶಾಸಕರು ಕೊಲೆಗಾರರ ಪತ್ತೆ ಹಚ್ಚುವ ಬಗ್ಗೆ ಪ್ರಸ್ತಾಪವನ್ನೆ ಎತ್ತುತ್ತಿಲ್ಲಾ ಈಗಿಗ ಯಾರೋ ಕೊಲೆಯಾಗುತ್ತಾರೆ ಯಾರೋ ಶಾಸಕರಾಗುತ್ತಾರೆ ಇನ್ನು ಮುಂದಿನ ದಿನಗಳಲ್ಲಿ ಘಟನೆ ಮರುಕಳಿಸಲು ಕಾರ್ಯಕರ್ತರಾದ ನಾವು ಬಿಡಬಾರದು ಇದಕ್ಕೆ ನಾವು ತಕ್ಕ ಉತ್ತರ ಕೊಡಬೇಕು ಸತ್ತ ಕಾರ್ಯಕರ್ತರನ್ನು ಎಲ್ಲರು ಮರೆತೆ ಹೋಗುತ್ತಾರೆ ಕಾರ್ಯಕರ್ತರ ಮನೆಗೆ ನೇರವಾಗುವ ಕೆಲಸವಾಗುತ್ತಿಲ್ಲಾ ಮುಂದಿನ ದಿನಗಳಿಯಾದರು ಕೊಲೆಯಾದ ಕಾರ್ಯಕರ್ತರ ಮನೆಯವರಿಗೆ ಶಾಸಕರು ತಮ್ಮ ವೇತನದ ಹಣವನ್ನು ನೀಡುವಂತಾಗ ಬೇಕು ಕಾರ್ಯಕರ್ತರ ಸಾವನ್ನು ರಾಜಕಿಯಕ್ಕೆ ಬಳಸಿಕೊಳ್ಳುವುದು ನಿಲ್ಲಿಸಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ನೂರಾರು ಕಾರ್ಯಕರ್ತರು ದಿನು ಹಂಟರ್‌ ಹಾಗು ಶಿವಮೊಗ್ಗೆ ಕಾರ್ಯಕರ್ತ ಹರ್ಷ ಅವರ ಭಾವ ಚಿತ್ರಕ್ಕೆ ಪುಷ್ಟಾರ್ಚನೆಯನ್ನು ನಡೆಸಿ ಅಶ್ರುತರ್ಪಣವನ್ನು ನೀಡಿದರು

ಈ ಸಂದರ್ಬದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮುಟ್ಟಳ್ಳಿ, ತಾಲೂಕ ಸಹ ಪ್ರಧಾನ ಕಾರ್ಯದರ್ಶಿ ಗಣೇಶ ನಾಯ್ಕ, ಖಜಾಂಚಿ ಕ್ರಷ್ಣ ಕಂಚುಗಾರ್‌ , ಬಿಜೆಪಿ ಮುಖಂಡ ಮಠದ ಹಿತ್ಲು ಮಂಜು ನಾಯ್ಕ, ಹಾಗು ನೂರಾರು ಹಿಂದೂಕಾರ್ಯಕರ್ತರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top