ಸೋಲು ಶಾಶ್ವತವಲ್ಲ ಮಾಜಿ ಶಾಸಕ ಮಂಕಾಳ ಎಸ್.‌ ವೈದ್ಯ ರಿಂದ ವಿದ್ಯಾರ್ಥಿಗಳಿಗೆ ಕಿವಿ ಮಾತು .

ಭಟ್ಕಳ : ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಬೀನಾ ವಾಲಿಬಾಲ್‌ ಲೀಗ್‌ ಪಂದ್ಯಾವಳಿಯನ್ನು ಭಟ್ಕಳ ಉಪ ವಿಭಾಗದ ಉಪಾಧೀಕ್ಷಕ ಕೆ.ಯು. ಬೆಳ್ಳಿಯುಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಹೆಚ್ಚಿನ ಗಮನ ಕೊಡಬೇಕು, ಗೂರಿ ಸಾಧನೆಯೇ ನಿಮ್ಮ ಮುಖ್ಯ ಉದ್ದೇಶವಾಗಬೇಕು, ಸಮಾಜದಲ್ಲಿ ನಡೆಯುವ ಇತರ ವಿಷಯಗಳ ಕುರಿತು ಗಮನ ಹರಿಸದೇ ನಿಮ್ಮ ವಿದ್ಯಾಭ್ಯಾಸವನ್ನೇ ಮುಖ್ಯವಾಗಿಟ್ಟು ಮುಂದೆ ಸಾಗಿರಿ ಎಂದು ಕರೆ ನೀಡಿದರು. ಸಮಾಜದಲ್ಲಿ ನಡೆಯುವ ಉತ್ತಮ ಕಾರ್ಯಗಳಿಗೆ ಮಾತ್ರ ನೀವು ಗಮನ ನೀಡಿ ನೀವೂ ಕೂಡಾ ಉತ್ತಮ ನಾಗರಿಕರಾಗಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಂಕಾಳ ಎಸ್.‌ ವೈದ್ಯ ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿಗೂ ಕೂಡಾ ತಮ್ಮ ಜ್ಞಾನಾರ್ಜನೆಯ ಕಡೆಗೆ ಗಮನ ನೀಡಬೇಕು .ನಾವು ನಿಮಗೆ ಯಾವುದೇ ರೀತಿಯ ತರಬೇತಿ ನೀಡಲು ಸಿದ್ದರಿದ್ದೇವೆ, ಅದನ್ನು ಪಡೆದುಕೊಂಡು ನೀವು ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳ ಸಾಧನೆಗೆ ಪೂರಕವಾದ ವಾತಾವರಣ ಕಲ್ಪಿಸುವದರ ಜೊತೆಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದೂ ಭರವಸೆ ನೀಡಿದ ಅವರು ಸಾಧನೆಗೆ ಕೊರತೆ ಎನ್ನುವುದಿಲ್ಲ. ಮನಸ್ಸು ಮುಖ್ಯ ಎಂದರು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಬನ್ನಿರಿ ಎಂದು ಕರೆ ನೀಡಿದ ಅವರು ಸೋಲು ಎಂದೂ ಶಾಶ್ವತವಲ್ಲ ಎಂದು ಕಿವಿ ಮಾತು ಹೇಳಿದರು.

ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಪ್ಪಲತಾ ವೈದ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top