ಭಟ್ಕಳ :ತಾಲೂಕಿನ ಯುವ ಶಕ್ತಿ ಎಂದೆ ಹೆಸರಾಗಿದ್ದ ಸಮಾಜ ಸೇವಕ ದಿವಂಗತ ದಿನೇಶ ನಾಯ್ಕ ಯಾನೆ ದೀನು ಹಂಟರ್ ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲೆಂದು ಅವರ ಸ್ಮರಣಾರ್ಥವಾಗಿ ದಿನಾಂಕ 10/03/2022 ನಡೆಯಲಿರುವ ತಾಲೂಕ ಪುಣ್ಯ ಸ್ಥಳ ಹೋಗೆವಡ್ಡಿ ಜಾತ್ರಾ ಮಹೋತ್ಸವದಲ್ಲಿ ಮಹಾ ಅನ್ನಸಂತರ್ಪಣೆ ನಡೆಸಲಾಗುವುದು.
ತಾಲೂಕಿನ ಪ್ರತಿಷ್ಟಿತ ಉದ್ದಿಮೆದಾರರು ಸಮಾಜ ಸೇವಕರು ಆದ ಈಶ್ವರ ನಾಯ್ಕ ಮುಂದಾಳತ್ವದಲ್ಲಿ ತಾಲೂಕಿನ ಪುರಾಣ ಪ್ರಸಿದ್ದ ಪುಣ್ಯ ಸ್ಥಳವಾದ ಹೊಗೆವಡ್ಡಿ ಕೋಟೆ ಶ್ರೀ ವಿರಾಂಜನೆಯ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಯುವ ಜನತೆಯ ಕಣ್ಮಣಿ ಸಮಾಜ ಸೇವಕ ದಿವಂಗತ ದಿನೇಶ ಯಾನೆ ದೀನು ಹಂಟರ್ ಅವರ ಸ್ಮರಣಾರ್ಥ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯಲಿ ಹಾಗು ಅವರ ಅಕಾಲಿಕ ಮರಣದಿಂದ ಅವರ ಕುಟುಂಬಕ್ಕೂ ಬಂದು ಮಿತ್ರರು ಹಾಗು ಸ್ನೇಹಿತ ವರ್ಗದವರಿಗೆ ಆದ ಆಘಾತ ಸಹಿಸಿಕೊಳ್ಳುವ ಶಕ್ತಿ ಕರುಣಿಸಲಿ ಎಂಬ ಉದ್ದೇಶದಿಂದ ಮಹಾ ಅನ್ನ ಸಂತರ್ಪಣೆಯನ್ನು ನಡೆಸಲಾಗುತ್ತದೆ.
ಉದ್ಯಮಿ ಈಶ್ವರ ನಾಯ್ಕ ಅವರ ಈ ಸಮಾಜ ಮುಖಿ ಕಾರ್ಯಕ್ಕೆ ತಾಲೂಕಿನಾಧ್ಯಂತ ಪ್ರಶಂಸೆಯ ಸುರಿಮಳೆ ಉಂಟಾಗಿದೆ ಅವರು ಹೀಗೆ ಇಂತಹ ಸಮಾಜ ಮುಖಿ ಕಾರ್ಯ ನಡೆಸುತ್ತಲೆ ಇರಲಿ ಹಾಗು ದಿನೇಶ ಯಾನೆ ದೀನು ಹಂಟರ್ ಅವರ ದಿವ್ಯಾತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ ಎಂದು ಭಟ್ಕಳ ತಾಲೂಕ ಸಾರ್ವಜನಿಕರು ಆಶಿಸುತ್ತಿದ್ದಾರೆ