ದಕ್ಷಿಣ ಕನ್ನಡ(ಸುಳ್ಯ): ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ಪಾಷಾಣವನ್ನು ಟೂತ್ ಬ್ರೆಷ್ಗೆ ಹಾಕಿಕೊಂಡು ಹಲ್ಲುಜ್ಜಿದ ಪಿಯುಸಿ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡು , ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ . ಬಾಯಿಗೆ ನೀರು ಹಾಕಿಕೊಂಡು ಸ್ವಚ್ಛ ಮಾಡಿಕೊಂಡಿದ್ದಳು . ಬಾತ್ ರೂಮಿನಲ್ಲಿ ಸ್ವಲ್ಪ ಕತ್ತಲಿದ್ದಿದ್ದರಿಂದ ಶ್ರಾವ್ಯ , ಇಲಿ ಪಾಷಾಣವನ್ನೇ ತಪ್ಪಾಗಿ ಕೈಗೆತ್ತಿಕೊಂಡಿದ್ದಳು ಎಂದು ತಿಳಿದು ಬಂದಿದೆ .
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬೇರಿಕೆ ರಮೇಶ ಎಂಬುವರ ಮಗಳು ಶ್ರಾವ್ಯ ( 17 ) ಸಾವಿಗೀಡಾದ ವಿದ್ಯಾರ್ಥಿನಿ . ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಶ್ರಾವ್ಯ , ವಾರದ ಹಿಂದೆ ಶಾಲೆಗೆ ರಜೆ ಇದ್ದ ಕಾರಣ ಮರ್ಕಂಜದಲ್ಲಿನ ತನ್ನ ಮನೆಗೆ ಬಂದಿದ್ದಳು .
ಮನೆಯಲ್ಲಿ ಬಾತ್ ರೂಮಿನ ಕಿಟಕಿಯಲ್ಲಿದ್ದ ಇಲಿ ಪಾಷಾಣವನ್ನು ತಪ್ಪಾಗಿ ಭಾವಿಸಿ ಟೂತ್ ಬ್ರೆಷ್ಗೆ ಹಾಕಿಕೊಂಡು , ಸ್ವಲ್ಪ ಹಲ್ಲುಜ್ಜಿದ್ದಾಳೆ . ಆದರೆ , ಕೆಲ ಕ್ಷಣದಲ್ಲೇ ತಾನು ಹಾಕಿರುವುದು ಪೇಸ್ಟ್ ಅಲ್ಲ ಎಂದು ಅರಿವಾಗಿದೆ .
ಬಾಯಿಗೆ ನೀರು ಹಾಕಿಕೊಂಡು ಸ್ವಚ್ಛ ಮಾಡಿಕೊಂಡಿದ್ದಳು . ಬಾತ್ ರೂಮಿನಲ್ಲಿ ಸ್ವಲ್ಪ ಕತ್ತಲಿದ್ದಿದ್ದರಿಂದ ಶ್ರಾವ್ಯ ಇಲಿ ಪಾಷಾಣವನ್ನೇ ತಪ್ಪಾಗಿ ಕೈಗೆತ್ತಿಕೊಂಡಿದ್ದಳು ಎಂದು ತಿಳಿದು ಬಂದಿದೆ . ಬಳಿಕ ಪೋಷಕರು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು . ಅಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರಾವ್ಯ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ . ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .