ಹೊನ್ನಾವರ: ಮನೆಯ ಅಂಗಳದಲ್ಲಿದ್ದ ಚಾಲಿ ಅಡಿಕೆ ಚೀಲ ನಾಪತ್ತೆ ..!


ಹೊನ್ನಾವರ : ಮನೆಯ ಅಂಗಲದಲ್ಲಿರುವ ಚಾಲಿ ಅಡಿಕೆ ಕಳ್ಳತನ ! ಸಿಸಿ ಕ್ಯಾಮರದಲ್ಲಿ ಸೆರೆಯಾದ ಕಳ್ಳತನದ ದೃಶ್ಯಾವಳಿ , ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ . ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಗಜನಿಕೇರಿಯ ಸುರೇಶ ಶೆಟ್ಟಿ ಎನ್ನುವವರ ಮನೆಯ ಅಂಗಳದಲ್ಲಿ ಇಡಲಾದ ಚಾಲಿ ಅಡಿಕೆಯನ್ನು ಗುರುವಾರ ರಾತ್ರಿ 9 ಗಂಟೆಗೆ ಕಳ್ಳತನ ನಡೆದಿದೆ .

ಮನೆಯ ಗೇಟ್ ತೆಗೆದು ಸುತ್ತಮುತ್ತಲೂ ಯಾರು ಇಲ್ಲದೇ ಇರುವುದನ್ನು ಗಮನಿಸಿ ಒಳ ಬಂದು ಅಡಿಕೆ ಮೂಟೆಯನ್ನು ತೆಗೆದುಕೊಂಡು ರಸ್ತೆಯಲ್ಲಿ ನಿಂತಿದ್ದ ಆಟೋ ಒಳಗೆ ಹಾಕಿದ್ದಾನೆ ಈ ಎಲ್ಲಾ ದೃಶ್ಯಾವಳಿ ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ .

ಸಿ.ಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಸಿಕ್ಕಿಬಿದ್ದ ಕಳ್ಳ !

ಮನೆಯ ಗೇಟ್ ತೆರೆದಿದ್ದು ಅಡಿಕೆ ಮೂಟೆ ಕಾಣದೇ ಇರುವುದನ್ನು ಗಮನಿಸಿ ಸಿ.ಸಿ. ಕ್ಯಾಮರ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ . ಕೂಡಲೇ ಮನೆ ಮಾಲಿಕ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿ ಹುಡುಕಾಟದಲ್ಲಿ ತೊಡಗಿದ್ದಾಗ ಗ್ರಾಮದ ಸಲ್ಪ ದೂರದಲ್ಲಿ ಅಡಿಕೆ ಮೂಟೆಯೊಂದಿಗೆ ಆರೋಪಿ ಮುಗ್ವಾ ಬಂಕನಹಿತ್ತಲ್ ನಿವಾಸಿ ನಾರಾಯಣ ಗಣೇಶ ನಾಯ್ಕ ಸಿಕ್ಕಿಬಿದ್ದಿದ್ದಾನೆ .

ಆರೋಪಿಯನ್ನು ಅಡಿಕೆ ಮೂಟೆಯೊಂದಿಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು , ಇವರಿಗೆ ಸಹಕಾರ ನೀಡಿದ ಆಟೋ ಚಾಲಕ ಸೇರಿದಂತೆ ಸಹಾಯ ಮಾಡಿದವರ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕಿದೆ . ಈ ಸಂಭಂದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

WhatsApp
Facebook
Telegram
error: Content is protected !!
Scroll to Top