ದಕ್ಷಿಣಕನ್ನಡ(ಉಡುಪಿ): ಬಳ್ಳಾರಿ – ಮಣಿಪಾಲ ಖಾಸಗಿ ಬಸ್ ನಲ್ಲಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡು , ಬಳಿಕ ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಣಿಪಾಲದಲ್ಲಿ ಇಂದು ಮುಂಜಾನೆ ನಡೆದಿದೆ. ದುರ್ಗಾಂಬಾ ಸಂಸ್ಥೆಗೆ ಸೇರಿದ ಬಸ್ ಇದಾಗಿದೆ.
ಬಳ್ಳಾರಿಯಿಂದ ಮಣಿಪಾಲಕ್ಕೆ ಪ್ರಯಾಣಿಕರನ್ನು ಹೊತ್ತು ತಂದ ಬಸ್ ನಲ್ಲಿ ಸಣ್ಣದಾಗಿ ಹೊಗೆ ಕಾಣಿಸಿಕೊಂಡಿದೆ.ಇದನ್ನು ಗಮನಿಸಿದ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದ್ದಾರೆ.ಸಣ್ಣದಾಗಿ ಕಾಣಿಕೊಂಡ ಬೆಂಕಿ ಕೆಲವೇ ಹೊತ್ತಲ್ಲಿ ಬಸ್ ನ್ನು ವ್ಯಾಪಿಸಿತು.
ಮುಂಜಾನೆ ವೇಳೆಯಾಗಿದ್ದರಿಂದ ಬೆಂಕಿ ನಂದಿಸಲು ಯಾರೂ ಸಿಗಲಿಲ್ಲ.ನೋಡ ನೋಡುತ್ತಿದ್ದಂತೆಯೇ ಬಸ್ ರಸ್ತೆಯಲ್ಲೇ ಹೊತ್ತಿ ಉರಿಯಿತು. ಅದೃಷ್ಟವಶಾತ್ ಪ್ರಯಾಣಿಕರು ,ಚಾಲಕ ಮತ್ತು ನಿರ್ವಾಹಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.