ಭಟ್ಕಳ ತಾಲೂಕಿನ ಯುವ ಮುತ್ಸದ್ದಿ ಹಿಂದೂವಾದಿ ದಿನೇಶ ನಾಯ್ಕ ದೀನು ಹಂಟರ್ ಶನಿವಾರ ಹೃದಯಾಘಾದಿಂದ ವಿದಿ ವಶವಾಗುವುದರ ಮೂಲಕ ಯುವ ಶಕ್ತಿಗೆ ತುಂಬಲಾರದ ನೊವು ಉಂಟಾಗಿದೆ
ತಾಲೂಕಿನಲ್ಲಿ ಸಾಮಾಜಿಕ ಹೊರಾಟ ನೊಂದವರ ಕಣ್ಣೊರೆಸುವುದು ಹಾಗು ಯುವ ಜನತೆಯಲ್ಲಿ ಆತ್ಮ ವಿಶ್ವಾಸವನ್ನು ತುಂಬುವಲ್ಲಿ ದಿನೇಶ ನಾಯ್ಕ ಯಾನೆ ದೀನು ಹಂಟರ್ ಮುಂಚುಣಿಯಲ್ಲಿದ್ದರು ಇವರು ತಾಲೂಕಿನಲ್ಲಿ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯರಾಗಿ ನಿಸ್ವಾರ್ಥವಾಗಿ ಹಿಂದೂತ್ವಕ್ಕಾಗಿ ತಮ್ಮ ಜೀವನವನ್ನೆ ದಾರೆ ಎರೆದಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲಾ ಇವರು ಹಾಲಿಯಾಗಿ ಹಿಂದೂತ್ವಕ್ಕಾಗಿ ಹಿಂದೂ ಜಾಗರಣಾ ವೇದಿಕೆಯಲ್ಲಿ ಮುಖಂಡತ್ವವನ್ನು ವಹಿಸಿ ಹಿಂದೂತ್ವಕ್ಕಾಗಿ ತಮ್ಮ ತೊಡಗಿಸಿಕೊಂಡಿದ್ದರು.
ಇವರು ತೀವ್ರ ಹೃದಯಾಘಾತದಿಂದ ಶನಿವಾರ ಸಂಜೆ ನಿಧನರಾಗಿರುವುದು ತುಂಬಲಾರದ ನೋವನ್ನು ಉಂಟು ಮಾಡಿದೆ . ಶನಿವಾರ ಮಧ್ಯಾಹ್ನ ಊಟ ಮಾಡಿದ ನಂತರ ಇವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿ , ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೊಗುತ್ತಿರುವಾಗ ದಾರಿ ಮದ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ
ಮೃತರು ಪತ್ನಿ, ಇಬ್ಬರು ಮಕ್ಕಳು , ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ . ಅಪಾರ ಬಂಧುಬಳಗವನ್ನು ನಿಧನಕ್ಕೆ ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಗಣ್ಯರು ಸಂತಾಪ ಸೂಚಿಸಿದ್ದಾರೆ .
ಈ ಯುವ ನಾಯಕನ ಅಗಲಿಕೆ ಭಟ್ಕಳ ತಾಲೂಕಿನಾಧ್ಯಂತ ದಿಗ್ಬ್ರಮೆಯನ್ನು ಉಂಟುಮಾಡಿದ್ದು ದೀನು ಹಂಟರ್ ಇಂದು ಯುವ ಜನತೆಯನ್ನು ಬಿಟ್ಟು ಹೊಗಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲಾ ಇವರ ಆತ್ಮಕ್ಕೆ ಆ ಭಗವಂತ ಚಿರ ಶಾಂತಿಯನ್ನು ದಯಪಾಲಿಸಲಿ ಇವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿ ಆ ಭಗವಂತ ನೀಡಲಿ ಎಂದು ನಮ್ಮ ಕರಾವಳಿ ಸಮಾಚಾರವು ಕೇಳಿಕೊಳ್ಳುತ್ತಿದೆ