ಭಟ್ಕಳ : ಹಿಂಸಾತ್ಮಕವಾಗಿ ಇಕ್ಕಟ್ಟಾದ ಪ್ರದೇಶದಲ್ಲಿ ಜಾನುವಾರು ಕಟ್ಟಿರುವುದನ್ನು ಗಮನಿಸಿದ ನಗರ ಠಾಣೆಯ ಪೊಲೀಸರು ದಾಳಿ ಮಾಡಿ , 8 ಜಾನುವಾರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳದ ಶಾಧಿ ಸ್ಪೀಟ್ ಮಸೀದಿ ಸಮೀಪ ನಡೆದಿದೆ .
ಯಾರೋ ಆರೋಪಿತರು ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 60 ಸಾವಿರ ಮೌಲ್ಯದ 8 ಜಾನುವಾರನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಶಾಧಿ ಸ್ವೀಟ್ ಮಸೀದಿ ಸಮೀಪದ ಹಾಡಿ ಜಾಗದಲ್ಲಿ ಹಿಂಸಾತ್ಮಕವಾಗಿ ಇಕ್ಕಟ್ಟಾಗಿ ಕಟ್ಟಿದ್ದಾಗ ಪೊಲೀಸರು ದಾಳಿ ನಡೆಸಿದ್ದರು .
ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ . ಈ ಪೈಕಿ ಒಂದು ಆಕಳು , ಒಂದು ಗಂಡು ಜೆರ್ಸಿ ಕರು , ಒಂದು ಹೋರಿ , ಐದು ಕರು ಹಾಗೂ ಹಗ್ಗವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ . ನಗರ ಠಾಣೆ ಪಿಎಸ್ಐ ಸುಮಾ ಬಿ . ಪ್ರಕರಣ ದಾಖಲಿಸಿಕೊಂಡಿದ್ದು , ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ .