ಬೈಲೂರು ಪಂಚಾಯತ ವ್ಯಾಪ್ತಿಯ ಅಕೇಶಿಯಾ ಪ್ಲಾಂಟೇಷನ್‌ಗೆ ಆಕಸ್ಮಿಕ ಬೆಂಕಿ..!

ಉತ್ತರ ಕನ್ನಡ :ನೀರಗದ್ದೆ ಮಾವಿನಕೂಡ್ಲವಿನ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಪ್ಲಾಂಟೇಷನ್ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ .

ತಾಲೂಕಿನ ಬೈಲೂರು ಪಂಚಾಯತ ವ್ಯಾಪ್ತಿಯಲ್ಲಿನ ನೀರಗದ್ದೆ ಮಾವಿನಕೂಡ್ಡ ಅರಣ್ಯ ಇಲಾಖೆಗೆ ಸೇರಿದ ಸರ್ವೇ ನಂ 600 ರಲ್ಲಿ 05 ಎಕರೆ ವಿಸ್ತೀರ್ಣದ ಅಕೇಶಿಯಾ ಪ್ಲಾಂಟೇಷನಗೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು ಇದನ್ನು ಗಮಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ .

ಘಟನೆ ಸ್ಥಳದ ಚಿತ್ರಣ

ತಕ್ಷಣ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp
Facebook
Telegram
error: Content is protected !!
Scroll to Top