KSP: ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ದಿಡಿರ್ ವರ್ಗಾವಣೆ
ಪೋಲಿಸ್ ಆಡಳಿತ ಯಂತ್ರಕ್ಕೆ ಬರ್ಜರಿ ಸರ್ಜರಿ

Police ಆಡಳಿತ ಯಂತ್ರಕ್ಕೆ ಮಹತ್ವದ ಸರ್ಜರಿ ಮಾಡಿರುವ ಸರ್ಕಾರ ಪೊಲೀಸ್ ಇಲಾಖೆಯ ಅನೇಕ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದೆ. ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸೇರಿ ಒಟ್ಟು 9 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ


ಅಪರಾಧಿ ತನಿಖಾ ದಳದ ಎಸ್ಪಿ ಆಗಿದ್ದ ರವಿ ಡಿ ಚನ್ನಣ್ಣನವರ್ ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಎಂಡಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಇದರ ಜೊತೆಗೆ ಅಪರಾಧಿ ತನಿಖಾದಳದ ಮತ್ತೊಬ್ಬ ಅಧಿಕಾರಿ ಭೀಮಶಂಕರ್ ಎಸ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಎಸಿಬಿ ಎಸ್ಪಿಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆಎಸ್ಆರ್ಟಿಸಿ (ಭದ್ರತೆ ಮತ್ತು ವಿಚಕ್ಷಣ) ನಿರ್ದೇಶಕರಾಗಿ, ಕೊಪ್ಪಳ ಎಸ್ಪಿ ಆಗಿರುವ ಶ್ರೀಧರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ


ಚಾಮರಾಜನಗರ ಎಸ್ಪಿ ಆಗಿರುವ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಡೆಪ್ಯೂಟಿ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ ಕಿಶೋರ್ ಬಾಬು ಅವರನ್ನು ಬೀದರ್ ಎಸ್ಪಿಯಾಗಿ, ಮೈಸೂರು ಎಸಿಬಿ ಎಸ್ಪಿ ಆಗಿರುವ ಅರುಣಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ನೇಮಕ ಮಾಡಲಾಗಿದೆ

WhatsApp
Facebook
Telegram
error: Content is protected !!
Scroll to Top