ಭಟ್ಕಳ ತಾಲೂಕ ವೆಲ್ಪೇರ್‌ ಆಸ್ಪತ್ರೆ ವತಿಯಿಂದ ಸುದ್ದಿಘೋಷ್ಟಿ: ಆಸ್ಪತ್ರೆಗೆ ಡಾ: ಭರತ್‌ ನಾಯ್ಕ ನೇಮಕ: ಜನವರಿ 26 ಕ್ಕೆ ಸಾರ್ವಜನಿಕರಿಗೆ ಪ್ರಿ ಕನ್ಸಲ್ಟೆಂಟ್‌

ಭಟ್ಕಳ: ತಾಲೂಕ ಕೊಲೋಕೋ ಆಸ್ಪತ್ರೆಗೆ ಮಾಜಿ ಶಾಸಕ ಜೆ.ಡಿ ನಾಯ್ಕ ಸುಪುತ್ರ ಜನರಲ್‌ ಸರ್ಜನ್‌ ಹಾಗು ಪ್ಲಾಸ್ಟಿಕ್‌ ಸರ್ಜರಿ ಸ್ಪೆಷಲಿಸ್ಟ ಭರತ್‌ ನಾಯ್ಕ ಅವರು ಇನ್ನು ಮುಂದೆ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯರಿದ್ದಾರೆ ಎಂದು ಆಸ್ಪತ್ರೆಯ ಮ್ಯಾನೆಜಿಂಗ್‌ ಡೈರೆಕ್ಟರ್‌ ಕಾದೀರ್‌ ಮಿರಾ ಪಟೇಲ್‌ ಹೇಳಿದರು

ಭಟ್ಕಳ ತಾಲೂಕಿನ ವೆಲ್ಪೇರ್‌ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಮಾತನಾಡಿ ಇನ್ನು ಮುಂದೆ ನಮ್ಮ ಆಸ್ಪತ್ರೆಯಲ್ಲಿ ಉತ್ತಮ ಸೇವೆಗಳು ದೋರೆಯಲಿದೆ ಕಾರಣ ನಾವು ಆಸ್ಪತ್ರೆಗೆ ನುರಿತ ವೈಧ್ಯರಾದ ಮಾಜಿ ಶಾಸಕ ಜೇ.ಡಿ ನಾಯ್ಕ ಅವರ ಸುಪುತ್ರರಾದ ಣರತ್‌ ನಾಯ್ಕ ಅವರನ್ನು ನೇಮಕ ಮಾಡಲಿದ್ದೆವೆ ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ತರದ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಹೇಳಿದರು.

ಈ ಸಂದರ್ಬದಲ್ಲಿ ನೇಮಕಗೊಂಡ ನುರಿತ ವೈಧ್ಯರಾದ ಭರತ್‌ ನಾಯ್ಕ ಮಾತನಾಡಿ ನಾನು ಮೂಲತ ಭಟ್ಕಳದವನೆ ಆಗಿದ್ದು ನಾನು ಎಂ ಬಿ ಬಿ ಎಸ್‌ ಮತ್ತು ಜನರಲ್‌ ಸರ್ಜರಿ ಮತ್ತು ಪ್ಲಾಸ್ಟಿಕ್‌ ಸರ್ಜರಿಯಲ್ಲಿ ಪ್ರಾಕ್ಟೀಸ್‌ ಮಾಡಿ ನನಗೆ ಏಳು ವರ್ಷದ ಅನುಭವವನ್ನು ಪಡೆದಿರುತ್ತೆನೆ ತಮಿಳುನಾಡು ಮುಂತಾದ ಕಡೆ ಸೇವೆಯನ್ನು ಸಲ್ಲಿಸಿರುತ್ತೆನೆ ಈಗ ನಾನು ನಮ್ಮ ಭಟ್ಕಳದಲ್ಲೆ ಸೇವೆ ಸಲ್ಲಿಸುವ ನಿರ್ದಾರವನ್ನುವನ್ನು ಮಾಡಿರುತ್ತೆನೆ ನಮ್ಮಲ್ಲಿ ಬಡವರನ್ನು ಗಮನದಲ್ಲಿಟ್ಟುಕೊಂಡು ರೀಯಾಯಿತಿ ದರದಲ್ಲಿ ಸೇವೆಯನ್ನು ಒದವಗಿಸುತ್ತೆವೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಡಾ ಜಹಿರ್‌ ಕೋಲಾ ಮಾತನಾಡಿ ಮುಂಬರುವ ಜನವರಿ 26 ರಂದು ನಮ್ಮಲ್ಲಿ ಉಚಿತ ಸನ್ಸಲ್ಟೆಂಟ್‌ ಸೇವೆ ಒದಗಿಸಲಾಗುತ್ತಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಹಾಗು ಹೊಸದಾಗಿ ನಮ್ಮಲ್ಲಿ ಡಾ ಭರತ್‌ ನಾಯ್ಕ ಸೇವೆಗೆ ಲಬ್ಯವಿರುತ್ತಾರೆ ಏಕ್ಸಿಡೆಂಟ್‌ ಎಮರ್ಜೆನ್ಸಿ ಸಂದರ್ಬದಲ್ಲಿ ನಮ್ಮಲ್ಲಿ ೨೪ ಘಂಟೆ ಸೇವೆ ಒದಗಿಸಲಾಗುತ್ತದೆ ಸಾರ್ವಜನಿಕರಿಗೆ ರೀಯಾತಿ ದರದಲ್ಲಿ ಆಸ್ಪತ್ರೆಯ ಸೌಲಬ್ಯಗಳು ದೋರೆಯಲಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಅಬು ಆಲಾ ಬ್ರಮ್ಮಾವರ ಹಾಗು ಮತ್ತಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top