ಭಟ್ಕಳ:ಅಕ್ರಮವಾಗಿ ವಾಹನವೊಂದರಲ್ಲಿ ಎರಡು ಜಾನುವಾರು ಸಾಗಾಟ ಮಾಡುತ್ತಿರುವ ವೇಳೆ ಪುರವರ್ಗ ರಾಷ್ಟ್ರೀಯ ಹೆದ್ದಾರಿ 66ರ ಚರ್ಚ್ ಎದುರು ವಾಹನ ತಡೆದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ ಬಂಧಿತ ಆರೋಪಿಗಳು ಮುಜಾಪರ್ ಹುಸೇನ್ ಹಾಗೂ ಅಬ್ದುಲ್ ರೆಹಮಾನ್ ಎಂದು ತಿಳಿದು ಬಂದಿದೆ.
ಆರೋಪಿಗಳು ಯಾವುದೇ ಪಾಸ್ ಅಥವಾ ಪರವಾನಿಗೆ,ದಾಖಲೆ ಇಲ್ಲದೆ ವದೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಎರಡು ಹೋರಿಗಳನ್ನು ಹಿಂಸಾತ್ಮಕವಾಗಿ ಹಾಗು ಇಕ್ಕಟ್ಟಾಗಿ ಸಾಗಾಟ ಮಾಡಿಕೊಂಡು ಹೋಗುವ ವೇಳೆ ಪೊಲೀಸರು ದಾಳಿ ಮಾಡಿ ಆರೋಪಿಯ ಬಂಧಿಸಿದ್ದಾರೆ. ಈ ವೇಳೆ ಒಂದು ಹೋರಿ ತಪ್ಪಿಸಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ , ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಕ್ರಮ ಜಾನುವಾರು ಸಾಗಾಟ:ಎರಡು ಹೋರಿಗಳು ರಕ್ಷಣೆ
WhatsApp
Facebook
Telegram