ಸುನಿಲ್ ನಾಯ್ಕ ಕ್ರಪಾ ಪೋಷಿತ ಅಧಿಕಾರಿ ವರ್ಗದಿಂದ ಭಟ್ಕಳ ನಾಮದಾರಿ ಯುವಕ ಶಂಕರ್ ನಾಯ್ಕ ಚೌತನಿ ಗಡಿಪಾರು ರಾಜಕೀಯ ಪ್ರೇರೆಪೀತ

ಶಂಕರ್ ನಾಯ್ಕ ಚೌತನಿ ಅವರ ಜೀವಕ್ಕೆ ಅಪಾಯವುಂಟಾದರೆ ಅದಕ್ಕೆ ಸುನಿಲ್ ನಾಯ್ಕ ನೇರ ಹೋಣೆಯಾಗಿರುತ್ತಾರೆ

ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ‌ದ ಹಿಂದೂ ನಾಮದಾರಿ ಯುವಕರು

ಭಟ್ಕಳ: ಭಟ್ಕಳ ಹಿಂದೂ ನಾಮದಾರಿ ಯುವಕ ಶಂಕರ್ ನಾಯ್ಕ ಚೌತನಿ ಅವರನ್ನು ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಇದು ಬಿಜೆಪಿ ಚುನಾವಣಾ ಅಭ್ಯರ್ಥಿ ಸುನಿಲ್ ನಾಯ್ಕ ಕ್ರಪಾ ಪೋಷಿತ ಅಧಿಕಾರಿ ವರ್ಗದವರಿಂದ ನಡೆದ ಕ್ರತ್ಯವಾಗಿದೆ ಇದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಹೊನ್ನಾವರದ ಶಂಕರ್ ನಾಯ್ಕ ಪತ್ರಿಕಾಗೊಷ್ಟಿಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು .

ಅವರು ಶಂಕರ್ ನಾಯ್ಕ ಗಡಿಪಾರನ್ನು ವಿರೋದಿಸಿ ಕರೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಭಟ್ಕಳ ತಾಲೂಕಿಗೆ ಸುನಿಲ್ ನಾಯ್ಕ ತಂದಿರುವ ಅಧಿಕಾರಿಗಳು ಜನ ಸೇವೆಯನ್ನು ಮಾಡುತ್ತಿಲ್ಲಾ ಬದಲಾಗಿ ಸುನಿಲ್ ನಾಯ್ಕ ವಿರುದ್ದ ಮಾತನಾಡಿದವರ ಮೇಲೆ ಸುಳ್ಳು ಕೇಸಗಳನ್ನು ಹಾಕಿಸುವುದು ಶಂಕರ್ ನಾಯ್ಕ ಅವರಂತೆ ಅಮಾಯಕ ಹಿಂದೂ ಯುವಕರನ್ನು ಗಡಿಪಾರು ಮಾಡಿಸುವುದು ಇದೆ ಆಗಿದೆ ಶಂಕರ್ ನಾಯ್ಕ ಅವರು ಸುನಿಲ್ ನಾಯ್ಕ ವಿರುದ್ದ ಸುನಿಲ್ ನಾಯ್ಕ ನಡೆಸುವ ಪಾಪ ಕ್ರತ್ಯದ ವಿರುದ್ದ ದ್ವನಿ ಎತ್ತಿರುವ ಕಾರಣದಿಂದ ಶಂಕರ್ ನಾಯ್ಕ ಅವರನ್ನು ಗಡಿಪಾರು ಮಾಡಿಸಲಾಗಿದೆ ಸುನಿಲ್ ನಾಯ್ಕ ಹಿಂದೂ ಹೊರಾಟಗಾರನೆ ಅಲ್ಲ ಇತ ಬಿಜೆಪಿಗೆ ಸೆರ್ಪಡೆ ಆಗುವ ಮೊದಲು ಹಿಂದೂಗಳ ವಿರೋದಿಯಾಗಿದ್ದು ಹಿಂದೂ ಯುವಕರ ಮೇಲೆ ಪ್ರಕರಣ ದಾಖಲಿಸುವುದರಲ್ಲೆ ಕಾಲ ಕಳೇಯುತ್ತಿದ್ದನು ಆದರೆ ಶಂಕರ್ ನಾಯ್ಕ ಚೌತನಿ ಹುಟ್ಟೆ ಹಿಂದೂವಾದಿ 20 ವರ್ಷಕ್ಕೂ ಅಧಿಕ ಸಮಯದಿಂದ ಹಿಂದೂತ್ವಕ್ಕಾಗಿ ಹೊರಾಟ ಮಾಡುತ್ತಲೆ ಬರುತ್ತಿದ್ದಾನೆ ಆದರೆ ಈ ಸುನಿಲ್ ನಾಯ್ಕ ತನ್ನ ವಿರುದ್ದ ಯಾರಾದರು ದ್ವನಿ ಎತ್ತಿದರೆಂದರೆ ಅವರ ಮನೆ ಹೆಣ್ಣು ಮಕ್ಕಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಸಹ್ಯವಾಗಿ ಬರೆಯಿಸುವುದರ‌ ಮೂಲಕ ಹೆಣ್ಣಿನ ಮಾನಹರಣ ಮಾಡಲಾಗುತ್ತದೆ ಈ ಶಂಕರ್ ನಾಯ್ಕ ಗಡಿಪಾರು ಪ್ರಜಾಪ್ರಭುತ್ವದ ಕಗ್ಗೋಲೆ ಒಬ್ಬ ನಾಮದಾರಿ ಹುಡುಗನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಈ ಬಗ್ಗೆ ಎಲ್ಲರು ಎಚ್ಚೆತ್ತು ಕೊಳ್ಳಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ನಾಮದಾರಿ ಯುವಕ ವಾಸು ನಾಯ್ಕ ಭಟ್ಕಳ ಮಾತನಾಡಿ ಶಂಕರ್ ನಾಯ್ಕ ಹಿಂದೂತ್ವಕ್ಕಾಗಿ ಮೊದಲಿಂದಲೂ ಹೊರಾಟ ಮಾಡುತ್ತಲೆ ಬಂದಿದ್ದಾರೆ ಹೊದ ಚುನಾವಣೆ ಸಂದರ್ಬದಲ್ಲಿ ಶಂಕರ್ ನಾಯ್ಕ ಅವರನ್ನು ಗಡಿಪಾರು ಮಾಡಿರುವುದಿಲ್ಲಾ ಆದರೆ ಈಗ ಶಂಕರ್ ನಾಯ್ಕ ಅವರನ್ನು ಗಡಿಪಾರು ಮಾಡುತ್ತಾರೆ ಎಂದರೆ ಇದು ರಾಜಕಿಯ ಪ್ರೇರೆಪಿತ ಆತನ ಜೀವಕ್ಕೆ ಅಪಾಯವಾಗುವ ಸಂಬವವಿದೆ ಒಂದುವೇಳೆ ಹಾಗೊಂದು ವೇಳೆ ನಡೆದರೆ ಅದಕ್ಕೆ ಅದಿಕಾರಿ ವರ್ಗ ಹಾಗು ಸುನಿಲ್ ನಾಯ್ಕ ಕಾರಣವಾಗುತ್ತಾರೆ ಶಂಕರ್ ನಾಯ್ಕ ಜೀವಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಭದ್ರತೆ ಒದಗಿಸ ಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ಕ್ರಷ್ಣಾ ನಾಯ್ಕ ಬಲ್ಸೆ, ಬಿಜೆಪಿ ಮತ್ತು‌ ಸಂಘಟನೆಯ ಕಾರ್ಯಕರ್ತ, ಬಿಜೆಪಿ ಕಾರ್ಯಕರ್ತ ಮಂಜುನಾಥ ಗೌಡ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top