ಜನಶಕ್ತಿ ವೇದಿಕೆಯ ಅಧ್ಯಕ್ಷರ ನೆರವಿನಿಂದ ಪದ್ಮಶ್ರೀ ಪುರಸ್ಕ್ರತ ಜಾನಪದ ಕೋಗಿಲೆ ಸುಕ್ರಜ್ಜಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ
ಅಂಕೋಲಾ: ಪದ್ಮಶ್ರಿ ಪುರಸ್ಕ್ರತೆ ಸುಕ್ರಜ್ಜಿ ಅನಾರೋಗ್ಯದ ಹಿನ್ನೆಲೆಯಲ್ಲಿ ಹೊನ್ನಾವರ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಈಗ ಜನಶಕ್ತಿ ವೇದಿಕೆಯ ಅಧ್ಯಕ್ಷರ ನೆರವಿನಿಂದ ಸುಕ್ರಜ್ಜಿ ಗುಣಮುಖರಾಗಿ ಬುದುವಾರವಾದ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ
ಸುಕ್ರಜ್ಜಿ ಎಂದ ತಕ್ಷಣ ಅದೇ ಕ್ರಶ ಶರೀರ ಗಟ್ಟಿ ನಿಲುವಿನ ವ್ಯಕ್ತಿತ್ವ ನಮ್ಮಕಣ್ಣೆದುರಿಗೆ ಬರುತ್ತದೆ ಸುಕ್ರಜ್ಜಿ ಜಾನ ಪದ ಕೊಗಿಲೆ ಎಂಬ ಖ್ಯಾತಿಯನ್ನು ಪಡೆದಿದ್ದು ಜಾನಪದ ಸೊಗಡಿನ ಸುಕ್ರಜ್ಜಿ ಅನಾರೋಗ್ಯದ ಕಾರಣ ಆಸ್ಪತ್ರೆಯನ್ನು ಸೇರುವಂತಾಗಿತ್ತು ಈ ಸಮಯದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಅಂಕೋಲದ ಮಾದೇವ ನಾಯ್ಕ ನೆರವಿಗೆ ನಿಂತಿದ್ದಾರೆ ಇವರ ನೇರವಿನ ಕಾರಣ ನಮ್ಮ ಕರ್ನಾಟಕದ ಹೆಮ್ಮೆಯ ಜಾನಪದ ಕೋಗಿಲೆ ಖ್ಯಾತಿಯ ಸುಕ್ರಜ್ಜಿ ಹೊನ್ನಾವರ ಸರಕಾರಿ ಅಸ್ಪತ್ರೆಯಿಂದ ಇಂದು ಗುಣಮುಖರಾಗಿ ಡಿಶ್ಚಾರ್ಜ ಆಗಿ ಮನೆಯನ್ನು ತಲುಪಿದ್ದಾರೆ
ಈ ಸಂದರ್ಬದಲ್ಲಿ ಸಹಾಯಕರಾಗಿ ರಾಘು ಅಶೋಕ ನಾಯ್ಕ ಕೇಣಿ , ನಾಗರಾಜ್ ನಾಯ್ಕ ಹನುಮಠ ಮುಂತಾದವರು ಇದ್ದರು