ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ’; ಫ್ಯಾನ್ಸ್​ ಅತಿರೇಕಕ್ಕೆ ಶಿವರಾಜ್​ಕುಮಾರ್​ ಗರಂ..!

ಸ್ಟಾರ್​ ನಟರನ್ನು ಕಂಡಾಗ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಆಸೆಪಡುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಮಿತಿ ಮೀರುತ್ತದೆ. ಅಂಥ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಸಿಟ್ಟಾಗುವುದು ಸಹಜ. ಸಾಮಾನ್ಯವಾಗಿ ಶಿವರಾಜ್​ಕುಮಾರ್ (Shivarajkumar)​ ಅವರು ಕೋಪಗೊಳ್ಳುವುದಿಲ್ಲ. ಆದರೆ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದಾಗ ಅವರು ಸಿಟ್ಟಾಗುವುದುಂಟು.

ಈಗ ಮೈಸೂರಿನಲ್ಲಿ ಅದೇ ರೀತಿ ಆಗಿದೆ. ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ ಮತ್ತು ‘ಜೇಮ್ಸ್​’ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಶಿವಣ್ಣ ಮೈಸೂರಿಗೆ ತೆರಳಿದ್ದಾರೆ. ಅಲ್ಲಿನ ಶಕ್ತಿಧಾಮಕ್ಕೆ (Shakthidhama) ಪತ್ನಿ ಗೀತಾ ಶಿವರಾಜ್​ಕುಮಾರ್​ ಜೊತೆ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳು (Shivarajkumar Fans) ಫೋಟೋಗಾಗಿ ಮುಗಿಬಿದ್ದಿದ್ದಾರೆ. ಕೆಲವರ ವರ್ತನೆ ಕಂಡು ಶಿವರಾಜ್​ಕುಮಾರ್​ ಅವರಿಗೆ ಕೋಪ ಬಂದಿದೆ. ‘ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ. ಯಾಕೆ ಹೀಗೆಲ್ಲ ಮಾಡ್ತೀರಿ ಹೇಳಿ. ಅದೇ ಇಷ್ಟ ಆಗಲ್ಲ. ಯೇ ಬಿಡಣ್ಣಾ ಅಂತ ಏನ್​ ಅದು ಆವಾಜ್​? ಯಾರಿಗೆ ಆ್ಯಟಿಡ್ಯೂಡ್​ ತೋರಿಸ್ತಾ ಇದೀಯ ನೀನು?’ ಎಂದು ಶಿವರಾಜ್​ಕುಮಾರ್​ ಕೋಪ ವ್ಯಕ್ತಪಡಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top