ಶಿರಸಿ: ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು, ಅವರಿಂದ ನಗದು ಹಾಗೂ ಆಟಕ್ಕೆ ಬಳಸಲಾದ ಸಾಮಾಗ್ರಿಗಳನ್ನು ಜಪ್ತಿಪಡಿಸಿಕೊಂಡ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಮೀರಿ ಅಂದರ್- ಬಾಹರ್ ಆಡುತ್ತಿದ್ದ ತಂಡದ ಮೇಲೆ ಪೊಲೀಸ್ ದಾಳಿ ನಡೆದಿದೆ. ಸಾರ್ವಜನಿಕ ಸ್ಥಳವಾದ ನಗರದ ಕೋಟೆಕೆರೆ ಗ್ಯಾಸ್ ಪಂಪ್ ಹಿಂದುಗಡೆಯ ಜಾಗದಲ್ಲಿ ಅಂದರ್- ಬಾಹರ್ ಆಡುತ್ತಿದ್ದರು ಎನ್ನಲಾಗಿದೆ.
ನೆಹರುನಗರದ ಅಸ್ಲಾಂ ಮೌಲಾಲಿ ಮಳಗಿ, ರವಿ ನಾಯ್ಕ್, ಸರ್ಫರಾಜ್ ಹಂಚಿನಮನಿ, ಮಜೀದ್ ಶೇಖ್, ಇರ್ಫಾನ್ ಅಲಿ, ಅಸ್ಲಾಂ ಶರೀಫ್ ಹಾಗೂ ಸರ್ಫರಾಜ್ ಮದನಸಾಬ್ ಎಳ್ಳುರ ವಶದಲ್ಲಿರುವವರು. ಇವರಿಂದ ಆಟಕ್ಕೆ ಬಳಸಲಾದ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.