ಅಬಕಾರಿ ಸಿಬ್ಬಂದಿ ಮೇಲೆ ಹೆಚ್ಚೇನು ದಾಳಿ ಸಾವು : ದಾಳಿಯಿಂದ ಸಿಬ್ಬಂದಿ ಸಾವು

ಅಂಕೋಲಾ: ಗುರುವಾರ ತಾಲೂಕಿನ ಅಜ್ಜಿಕಟ್ಟಾ ಬಳಿ ಹೆಚ್ಚೇನು ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬಕಾರಿ ಇಲಾಖೆ ಸಿಬ್ಬಂದಿಯೊಬ್ಬರು ಮೃತ ಪಟ್ಟಿದ್ದಾರೆ.

ಬುಧವಾರ ಮಧ್ಯಾಹ್ನ ಯಲ್ಲಾಪುರದವರಾಗಿದ ಅಬಕಾರಿ ಇಲಾಖೆ ಮುಖ್ಯ ಸಿಬ್ಬಂದಿ ಹಸನ್ ಖಾನ್ ಕರೀಂ ಖಾನ್ (45)  ಉಪಾಹಾರ ತರಲು ಹೋಗಿದ್ದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚೇನು ದಾಳಿಗೆ ಈಡಾಗಿದ್ದರು. ಅವರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಸುಕಿನಲ್ಲಿ ಮೃತ ಪಟ್ಟಿದ್ದಾರೆ.

WhatsApp
Facebook
Telegram
error: Content is protected !!
Scroll to Top